ಸೋಮವಾರ, ಮೇ 28, 2018

318.ಕವನ-ಗೆಳೆತನ

ಗೆಳೆತನ

ನಮ್ಮ ಗೆಳೆತನಕೀಗ ಹದಿಹರೆಯ
ಬರದು ಒಂದೂ ಚುಕ್ಕಿ ಕಲೆಯೂ
ಇರುವುದು ಗೆಳೆತನಕೆ ಬೆಲೆಯು
ಬಿಡದೀ ಸ್ನೇಹದ ಮಾಯೆಯು..

ನಾನೆಲ್ಲೋ ನೀನೆಲ್ಲೋ ಬೇರೆ
ಬಾಳ ನೌಕೆಯಲಿ ಸಾಗುವುದು ಬೇರೆ
ಬೆಲೆ ನೀಡಿದ ಗೆಳೆತನಕೆ ಅಮೃತಧಾರೆ
ಮರೆಯಲಾರದು ಪ್ರೀತಿಯ ಕರೆ..

ಇಲ್ಲವು ಮೋಹ ಮತ್ಸರದ ಅಹಂಕಾರ
ತಿಳಿದು ಬಾಳಲು ಬದುಕು ಬಂಗಾರ
ಬೆಟ್ಟದಲಿ ಹುಟ್ಟಿ ಕಡಲ ಸೇರಿದ
ಹಿನ್ನೀರ ಓಟದ ನದಿಯಂತೆ..

ಬದುಕ ಬಂಡಿಯಲಿ ನಾವು ಪಯಣಿಗರು
ಸಾಗುತಿಹೆವು ಗುರಿಯಿಲ್ಲದೆಡೆಗೆ
ಉಳಿಸಿ ಹೋಗಬೇಕು ಸುಸ್ನೇಹವ
ಸಾರಬೇಕು ಗೆಳೆತನದ ಭಾವವ..
@ಪ್ರೇಮ್@

317. ಕವನ- ಮೋಡದ ಗುರಿ

ಸ್ಪರ್ಧೆಗೆ ಕವನ

ಪುಳಕಿತ ಮನ

ಸುಯ್ಯನೆ ಸುರಿದ ಸೋನೆ ಮಳೆಗೆ
ಸಂಗೀತದ ಸಲ್ಲಾಪದ ಸಂಭ್ರಮ
ಸುಲಲಿತ ಜಲಧಾರೆಯ ಸಿಹಿ ಸಂಚಲನಕೆ
ಸಾಗುತಿದೆ ಸವಿಯ ಸುರಿಸುತ ಸರಸರ..

ಸೋನೆಯ ಸವಿಯೊಳು ಸುರಿದಿದೆ ಸಾಗರ
ಸರಿಸಿದೆ ಮೋಡದ ಗುಂಪಿನ ತಂಪನು.
ಸಂಪಿಗೆ ಸವಿಯ ತರಿಸಿದೆ ಸರ್ವರಲಿ
ವರ್ಷ ಧಾರೆಯ ಸರಸಕೆ ಸೋತಿದೆ

ಇಳೆಯನು ತಲುಪಲು ಮಳೆಹನಿಗಾತುರ
ಹನಿಯನು ಕಳುಹಿಸಿ ಮೋಡಕೆ ಕಾತರ
ತಲುಪಿದ ಬಿಂದು ಸಾಗರ ಸೇರಲು
ಮೋಡಕೆ ತನ್ನ ಗುರಿ ತಲುಪಿದ ಸಂತಸ..

ಗುಡುಗಿನ ಕೆಲಸವು ಸರಳದಿ ಮುಗಿಯಲು
ಮಿಂಚಿನ ರಭಸಕೆ ಮರಿಗಳು ಜಿಗಿಯಲು
ಪಟಪಟ ಹನಿಗಳು ನೆಲವನು ತಾಕಲು
ಜುಳುಜುಳು ನೀರು ರಭಸದಿ ಹರಿಯಲು..
@ಪ್ರೇಮ್@

ಗುರುವಾರ, ಮೇ 24, 2018

316. ಗಝಲ್-15

ಗಝಲ್

ನನ್ನ ಮನದ ಕದ ತಟ್ಟಿದ್ದು ಆ ನಿನ್ನ ನಗು
ನನ್ನ ಕಣ್ಣನು ಅರಳಿಸಿದ್ದು ಆ ನಿನ್ನ ನಗು..

ನನ್ನ ಮೌನದ ಕಟ್ಟೆಯೊಡೆದು ಹೊರಬಂದೆ ನಾನು
ನನ್ನ ಭಾವಕ್ಕೆ ಪದವಾದದ್ದು ಆ ನಿನ್ನ ನಗು..

ಮನದ ಮಾತನು ಆಲಿಸುತ ಪದಕಟ್ಟಿ ಹಾಡಿದೆ
ತನ್ನಳಲನು ತೋಡಿಕೊಳಲು ಕಲಿಸಿದ್ದು ಆ ನಿನ್ನ ನಗು!

ವಿಜಯದ ಸಂಕೇತದಂತೆ ಅಡಿಗಡಿಗೆ ಬದುಕಿದೆ
ನನ್ನ ಬದುಕಿಗೆ ಆಧಾರವಾಗಿ ನಿಂತದ್ದು ಆ ನಿನ್ನ ನಗು!

ನನ್ನಂತರಂಗದಲಿ ಬಾಳ ಅರಿವ ಮೂಡಿಸಿದೆ
ಅಂತರಾಳದ ಕದ ತಟ್ಟಿ ಎಬ್ಬಿಸಿದ್ದು ಆ ನಿನ್ನ ನಗು..

ಜೀವನವ ಪ್ರೇಮದ ಕಡಲಲ್ಲಿ ಮುಳುಗಿಸಿದೆ
ಬಾಳ ಬಂಡಿಯ ಬೆಳಗಿಸಿದ್ದು ಆ ನಿನ್ನ ನಗು!

@ಪ್ರೇಮ್@

315. ಗಝಲ್-14

ಗಝಲ್

ನೀ ನನ್ನ ಕಂಡು ಕಣ್ಣಲ್ಲೆ ಮಾತನಾಡಿದ ನೆನಪು
ನಿನ್ನ ನನ್ನ ಮನಗಳು ಒಂದಾದ ನೆನಪು..

ನಿನ್ನ ಬಿಸಿ ಉಸಿರೆನಗೆ ತಾಗಿದಾಗ
ನನ್ನೆದೆ ಪುಳಕದಿ ಪುಟಿದೆದ್ದ ನೆನಪು..

ನಿನ್ನ ಹಿತವಾದ ಸ್ಪರ್ಶದ ಸುಖಕೆ
ತನುಮನ ರೋಮಾಂಚನಗೊಂಡ ನೆನಪು..

ನೀ ನನ್ನ ಬಾಳಲ್ಲಿ ಬರುವೆಯೆಂದಾಗ
ಬಾಳ ಹೂಜೇನು ಸವಿದಂಥ ನೆನಪು..

ನಡು ನದಿಯ ಕಲ್ಲಲಿ ಕುಳಿತು
ಭವಿಷ್ಯದ ಬಗೆಗಿನ ಕನಸ ಕಟ್ಟಿದ ನೆನಪು..

ಹಚ್ಚ ಹಸಿರ ಪಚ್ಚೆ ಗದ್ದೆಯ ನಡುವಲಿ
ನೀ ನನ್ನನೆತ್ತಿ ಮುದ್ದಾಡಿದ ನೆನಪು..

ನಿನ್ನ ಮಾತನು ಕೇಳುತ್ತಾ ಕೇಳುತ್ತಾ
ನಿನ್ನ *ಪ್ರೇಮ* ಪಾಶದಿ ಬಿದ್ದಂತ ನೆನಪು..
@ಪ್ರೇಮ್@

ಬುಧವಾರ, ಮೇ 23, 2018

315. ಕವನ-ಚಂದಿರ

ಭಾವಗೀತೆ

ಸ್ಪರ್ಧೆಗಾಗಿ

ಬಾರೋ

ನನ್ನ ನೋಡೋ ಚಂದಿರ
ಬಾರೋ ಬೇಗ ಸುಂದರ
ನನ್ನ ಮನಕೆ ಮುದವ ನೀಡೋ
ನನ್ನ ಹೃದಯ ತಂಪು ಮಾಡೋ..

ಚಂದಮಾಮ ನೀನು ಬರದೆ
ನಾನು ಸರಿಸೆ ಮನೆಯ ಪರದೆ
ನಿನ್ನ ಬರವಿಗಾಗಿ ಕಾಯುವೆ
ನಿನ್ನ ಮಡಿಲ ಸೇರೆ ಬೇಡುವೆ...

ಮನಕೆ ಮುದವ ನೀಡು ನೀನು
ಬೆಳಗ್ಗೆ ಎಬ್ಬಿಸಲು ಬರುವ ಭಾನು
ನೀನು ಭುವಿಯ ತಾಪ ತಣಿಸು
ಬಾನ ತಾರೆಯೆಲ್ಲ ಎಣಿಸು..

ಮನಕೆ ಮುದಕೆ ನೀಡು ಬಾರೊ
ಕನಸ ನನಸು ಮಾಡು ಬಾರೋ
ಎದೆಯಾಳದಿ ಇಣುಕು ಬಾರೋ
ನನ್ನ ಮೇಲೆ ಕರುಣೆ ತೋರೋ..
@ಪ್ರೇಮ್@

316. ಕವನ-ಧರಣಿ

ಧರಣಿ ನಗುತಿಹಳು

ಹಸಿರ ಸೀರೆಯ ಉಟ್ಟು
ನೀಲಿ ಕೊಡೆಯನು ಹಿಡಿದು
ಮಳೆರಾಯನ ಬರವು ಕಾದು
ಧರಣಿ ಪಕಪಕನೆ ನಗುತಿಹಳು...

ಮೋಡದಾಟವ ನೋಡಿ ತಣಿದು
ಗಾಳಿ ಬೀಸುವ ದಿಕ್ಕ ನೆನೆದು
ಸೂರ್ಯ ಕಿರಣಕೆ ಬೀಗ ಜಡಿದು
ಧರಣಿ ಮಳೆಗಾಗಿ ಕಾದಿಹಳು...

ಮನಸ ತುಂಬಾ ಭಾನಿನ ಕಂಪು
ರಾತ್ರಿಯಾದೊಡೆ ಚಂದಿರನ ತಂಪು
ಪಶು ಪಕ್ಷಿಗಳ ರಾಗದ ಇಂಪು
ಧರಣಿ ವರುಣನಿಗಾಗಿ ಕಾಯುತಿಹಳು...

ಮನದೊಳಗೆಲ್ಲಾ ಜನರ ಹಿಡಿತ
ಹೃದಯದೊಳು ಜೀವಿಯ ಮಿಡಿತ
ಪಚ್ಚೆ ಹಸಿರ ಉಳಿಸೊ ತುಡಿತ
ಧರಣಿ ವರುಣನಿಗಾಗಿ ಕ್ಷಣಗಣನೆ ಮಾಡುತಿಹಳು...

@ಪ್ರೇಮ್@

ಮಂಗಳವಾರ, ಮೇ 22, 2018

314.2 ಹನಿಗಳು

1.ಭುವಿಗೆ

ನೀ ಮುನಿಸಾದರೆ ತಾಯಿ
ನಾ ಹೇಗೆ ಬದುಕಲಿ
ನಿನ್ನೆ ನಂಬಿಹ ರೈತ ನಾನು
ಕೊಡೆನಗೆ ಹೊನ್ನ ಬೆಳೆ
ನನ್ನ ಕಷ್ಟಕೆ ಉಸಿರಾಗಿ..

2. ಮದುವೆ ಸಮಯ
ಮದುವೆ ಸಮಯದಿ ಬಂತು
ವಧುವಿಗೆ ವರದಕ್ಷಿಣೆ ಪಡೆದ
ನವ ನವೀನ ವರನ ಮೇಲೆ ಮುನಿಸು
ಬಿಸುಟಳು ಆ ಹೂಮಾಲೆ
ಓಡಿದಳು ಪ್ರಿಯಕರನಲ್ಲೆ..
ಉಳಿಯಿತು ಮದುವೆ ಅಲ್ಲೆ..
@ಪ್ರೇಮ್@

313.ಹನಿಗಳು-2

1. ನೀ

ನೀ ಬಂದೆ ನನ್ನ ಬಾಳಿಗೆ
ಬಾನಲ್ಲಿ ಬೆಳದಿಂಗಳಿನಂತೆ!!
ನೀ ಮರೆಯಾದೆ ಶರವೇಗದಲಿ
ಅಮವಾಸ್ಯೆಯ ರಾತ್ರಿಯಂತೆ!!

2. ಕನಸು

ಬೆಳದಿಂಗಳೇ ಹಾಲಾಗಿ ಬಂದು
ಬೆಳಗುತ್ತಾ ನನ್ನೆದುರು ನಿಂದು
ಬಾ ಇಲ್ಲಿ ಕುಡಿ ನನ್ನ ಎಂದು
ಕರೆದಾಗ ಎಚ್ಚರಾಯ್ತು ಇಂದು!!
@ಪ್ರೇಮ್@

ಸೋಮವಾರ, ಮೇ 21, 2018

312. ಕವನ-ಹೆಣ್ಣು

1. ಸೈನಿಕರಿಗೆ
ಚಂಚಲರಾಗದಿರಿ ಎಂದೂ
ದೇಶ, ದೇಶದ ಜನತೆ
ಉಸಿರಾಡುತಿಹರು ಆರಾಮದಿ
ನಿಮ್ಮ ದಯೆಯಿಂದ
ನೀವು ಗಡಿ ಕಾಯದಿರೆ
ನೆಟ್ಟ ದಿಟ್ಟ ನೋಟದಲಿ
ಪ್ರತಿ ಪ್ರಜೆಗೂ ಸಂಕಟ
ಎಂದು ತಪ್ಪಲಿಕಿಲ್ಲ....!!!

2. ಇಳೆಗೆ

ಅಮ್ಮಾ, ಮಾನವನ ಕರಾಳ
ಕೃತ್ಯವ ಸಹಿಸದೆ ನೀನು
ಮಾನವರ ಗುಣದಂತೆ
ಚಂಚಲೆಯಾಗಿ ಮನ ಬಂದಂತೆ
ವರ್ತಿಸಲು ಆರಂಭಿಸಿದರೆ
ಮಾನವರೇನು?
ಏಕಕೋಶ ಜೀವಿಗಳಿಗೂ
ಬದುಕು ಸಾಧ್ಯವೇ ನಿನ್ನಲಿ?
@ಪ್ರೇಮ್@

311. ಹನಿಗವನ

1. ಸೈನಿಕರಿಗೆ
ಚಂಚಲರಾಗದಿರಿ ಎಂದೂ
ದೇಶ, ದೇಶದ ಜನತೆ
ಉಸಿರಾಡುತಿಹರು ಆರಾಮದಿ
ನಿಮ್ಮ ದಯೆಯಿಂದ
ನೀವು ಗಡಿ ಕಾಯದಿರೆ
ನೆಟ್ಟ ದಿಟ್ಟ ನೋಟದಲಿ
ಪ್ರತಿ ಪ್ರಜೆಗೂ ಸಂಕಟ
ಎಂದು ತಪ್ಪಲಿಕಿಲ್ಲ....!!!

2. ಇಳೆಗೆ

ಅಮ್ಮಾ, ಮಾನವನ ಕರಾಳ
ಕೃತ್ಯವ ಸಹಿಸದೆ ನೀನು
ಮಾನವರ ಗುಣದಂತೆ
ಚಂಚಲೆಯಾಗಿ ಮನ ಬಂದಂತೆ
ವರ್ತಿಸಲು ಆರಂಭಿಸಿದರೆ
ಮಾನವರೇನು?
ಏಕಕೋಶ ಜೀವಿಗಳಿಗೂ
ಬದುಕು ಸಾಧ್ಯವೇ ನಿನ್ನಲಿ?
@ಪ್ರೇಮ್@

307.ನುಡಿಮುತ್ತು

ನೇರ ಮಾರ್ಗದಲ್ಲಿ ನಡೆವವನಿಗೆ ಕಾಲ ಇದಲ್ಲ. ಕರೆದಾಗ ತಕ್ಷಣ ಬರಬಾರದು, ಸ್ಕೋಪ್ ತಗೋಬೇಕು! ಕೊಟ್ಟರೆ ತಿನ್ನ ಬಾರದು! ಸ್ಕೋಪ್! ಏನೂ ಇಲ್ಲದಿದ್ದರು ಮನೇಲಿ ಎಲ್ಲಾ ಉಕ್ಕಿ ಹರಿವಂತೆ ನಟಿಸಿದವನಿಗೇ ಗ್ರೇಡ್!!! ಇದು ಕಲಿಯುಗ!! ಹಾಗೆ ಬಾಳಲು ಬರದವರೇ ನಮ್ಮಂಥ ಪೆದ್ದುಗಳು!!!
@ಪ್ರೇಮ್@

309. ಕವನ-ರವಿಯ ಕರೆ

ರವಿಯ ಕರೆ

ಏಳಿರಿ ಎದ್ದೇಳಿರೆನುತ
ಕಿರಣಗಳ ಹರಿಯಬಿಟ್ಟು
ದಿನಗಳ ಸರಿಸಿಬಿಟ್ಟು
ಬೇಸರವ ಬದಿಗಿಟ್ಟು
ನಾ ಬಂದೆ, ಎದ್ದೇಳಿ!

ಮನದ ಕಸವ ಸರಿಸಿ
ಕೊಳೆಯನೆಲ್ಲ ತೊಳೆದು
ಕಸವನೆಲ್ಲ ಬಳಿದು
ಹೊಸ ದಿನವ ತಂದು
ನಾ ಬಂದೆ, ಎದ್ದೇಳಿ!

ರಾಜಕೀಯವೆಲ್ಲ ಮರೆತು
ಹೊಟ್ಟೆಪಾಡಿಗಾಗಿ ದುಡಿದು
ಹಂಚಿ ತಿಂದು ಬಾಳು ತೇದು
ಸಹನೆಯನ್ನು ನಿತ್ಯ ಪಡೆದು
ನಾ ಬಂದೆ, ಎದ್ದೇಳಿ!

ಕಷ್ಟಪಡುತ ದುಡಿದು ಬದುಕೆ
ಬಾಳಲೆಂದು ಭಯವು ಇರದು
ನಿನ್ನ ಬಾಳು ನಿನಗೆ ಎಂದು
ಗುರಿಯು ಇರಲಿ ಬದುಕಲೊಂದು
ನಾ ಬಂದೆ, ಎದ್ದೇಳಿ!
@ಪ್ರೇಮ್@

310. ಕರ್ನಾಟಕ ಸಾಂಗ್

ಕರ್ನಾಟಕ ಸಾಂಗ್

ಸಿಎಮ್ಮು ಬಂದ್ರಪ್ಪ ಸಿ ಎಮ್ಮು
ಜೆಡಿಎಸ್ ನ ಸಿ ಎಮ್ಮು
ಹೈ ಎಸ್ಟು ಓಟನ್ನು ಒತ್ತಿದ್ದು ಬಿಜೆಪ್ಗೆ
ಉಳಿದವ್ರು ಒತ್ತಿದ್ದು ಕಾಂಗ್ರೆಸ್ಗೆ..
ಓಟೆಲ್ಲಾ ಕಳ್ದು ರಿಸಲ್ಟ್ ಬಂದಾಗ
ಓಳಾದ ಮತದಾರ ಬಾಯ್ಬಿಟ್ಟ ಕೊನೆಗೆ!!

ಉಗೀತಿದ್ರು ಪಕ್ಕಗಳು ಪಕ್ಷಕ್ಕೆ ಎದುರೇ
ಹಣವನ್ನೂ ಹರಿಸಿದ್ರು ಓಟಿಗೆ ಅವರೇ
ಏನಾರೂ ಮಾಡ್ಕಳ್ಳಿ ಅಂತಂದ್ರು ಓಟರ್ಸ್
ತಗೊ ಅಂತ ಕೊಟ್ ಬಿಟ್ರು ಸೀಟೇ ಸೀಟು..
ಅಲ್ಲರ್ಧ ಇಲ್ಲರ್ಧ ಮತ್ತೆಲ್ಲೊ ಒಂದ್ ಕಾಲು..
ಜಾತಿ -ಮತ ಹೆಂಡ ಎಲ್ಲಕ್ಕು ಸೋಲು..

ಕ್ಯಾಂಟೀನ್ಗೂ ಓಟಿಲ್ಲ, ಭಾಗ್ಯಕ್ಕೂ ಬಗ್ಲಿಲ್ಲ
ನಂಬಿದ ಜನರೇ ಕೈಕೊಟ್ಟು ಬಿಟ್ರಲ್ಲ,
ಕಾಂಗ್ರೆಸ್ಗೂ ಅರ್ಧರ್ಧ, ಜೆಡಿಎಸ್ಗರ್ಧರ್ಧ
ಮಂತ್ರಿ ಸೀಟಲ್ಲು ಉಂಟಂತೆ ಪಾಲು
ಒಟ್ಟಾರೆ ಕನ್ನಡದ ಗೋಳೇ ಗೋಳು...

ಸಿಎಮ್ಮು ಯಾರಾಗ್ಲಿ ದುಡಿಬೇಕು ನೀವೇ
ನಮ್ಮಯ ಊಟವ ಪಡಿಬೇಕು ನಾವೇ...
ಪಕ್ಷಗಳೊಲವು ಕಡಿಮೆಯಾಗಲಿ ನಮ್ಮಲ್ಲಿ
ಚಿಂತೆ ತೊಲಗಿಸೊ ರಾಜಕಾರಿಣಿ  ಇರ್ಲಿ
ಕನ್ನಡ ಜನತೆ ನೆಮ್ಮದಿ ಕಾಣಲಿ.
@ಪ್ರೇಮ್@

308. ನನ್ನ ವಿಮರ್ಷೆ

ಜೀವರಾಜ್ ಸರ್ ರ ಮೃತ್ಯು ನೇತ್ರ ಕವನ ಒಳ್ಳೆಯ ಪರಿಕಲ್ಪನೆಯನ್ನು ಪದಗಳ ಗೂಡಲ್ಲಿ ಕಟ್ಟಿಟ್ಟಿರುವರು.
ಆಶಾಭಾವ, ಕೊನೆಯಲ್ಲಿ ಹಾರೈಕೆ, ಕಳೆದುಕೊಂಡ ಬೇಸರ, ಮತ್ತೆ ಪಡೆಯಲಾಗದ ಹತಾಶೆ, ಕಾರಣರಾದವರ ಮೇಲಿನ ಕೋಪ... ಈ ಎಲ್ಲಾ ಭಾವಗಳು ಎದ್ದು ಬರುವಂತೆ ಸ್ಫುರಿತವಾಗಿವೆ. ಕವಿಭಾವಕ್ಕೆ ಧಕ್ಕೆಯಾಗಿದ್ದರೆ ಮನ್ನಿಸಿ. ಧನ್ಯವಾದಗಳು...

306. ನಾನು-ಕವನ

ನಾನು

ನನ್ನ ಮನವು
ಹಿತವಾಗಿ ನಗಲು
ನನ್ನ ಹೃದಯ
ಸ್ವಚ್ಛವಿರಲು
ನನ್ನ ಕನಸು
ನನಸಾಗುವುದು..

ನನ್ನ ದೇಹ
ಶುದ್ಧವಿರಲು
ನನ್ನ ಭಜನೆ
ನಿಜದೊಳಿರಲು
ನಮ್ಮ ಮನೆಯು
ಬೆಳಗುವುದು..

ನನ್ನ ಮಾತು
ಸಿಹಿಯಾಗಿರಲು
ನನ್ನ ಕಾರ್ಯ
ಸರಿಯಾಗಿರಲು
ನನಗೆ ದೇವ
ಒಲಿದು ಬರುವನು..

ನನ್ನ ರಕ್ತ
ಹಂಚುತಿರಲು
ನನ್ನ ಸಹಾಯ
ಸಿಗುತಲಿರಲು
ಪರರ ಪ್ರಾರ್ಥನೆ
ನಮ್ಮ ಕಾವುದು..

@ಪ್ರೇಮ್@

ಶನಿವಾರ, ಮೇ 19, 2018

310. ಕರ್ನಾಟಕ ಸಾಂಗ್

ಕರ್ನಾಟಕ ಸಾಂಗ್

ಸಿಎಮ್ಮು ಬಂದ್ರಪ್ಪ ಸಿ ಎಮ್ಮು
ಜೆಡಿಎಸ್ ನ ಸಿ ಎಮ್ಮು
ಹೈ ಎಸ್ಟು ಓಟನ್ನು ಒತ್ತಿದ್ದು ಬಿಜೆಪ್ಗೆ
ಉಳಿದವ್ರು ಒತ್ತಿದ್ದು ಕಾಂಗ್ರೆಸ್ಗೆ..
ಓಟೆಲ್ಲಾ ಕಳ್ದು ರಿಸಲ್ಟ್ ಬಂದಾಗ
ಓಳಾದ ಮತದಾರ ಬಾಯ್ಬಿಟ್ಟ ಕೊನೆಗೆ!!

ಉಗೀತಿದ್ರು ಪಕ್ಕಗಳು ಪಕ್ಷಕ್ಕೆ ಎದುರೇ
ಹಣವನ್ನೂ ಹರಿಸಿದ್ರು ಓಟಿಗೆ ಅವರೇ
ಏನಾರೂ ಮಾಡ್ಕಳ್ಳಿ ಅಂತಂದ್ರು ಓಟರ್ಸ್
ತಗೊ ಅಂತ ಕೊಟ್ ಬಿಟ್ರು ಸೀಟೇ ಸೀಟು..
ಅಲ್ಲರ್ಧ ಇಲ್ಲರ್ಧ ಮತ್ತೆಲ್ಲೊ ಒಂದ್ ಕಾಲು..
ಜಾತಿ -ಮತ ಹೆಂಡ ಎಲ್ಲಕ್ಕು ಸೋಲು..

ಕ್ಯಾಂಟೀನ್ಗೂ ಓಟಿಲ್ಲ, ಭಾಗ್ಯಕ್ಕೂ ಬಗ್ಲಿಲ್ಲ
ನಂಬಿದ ಜನರೇ ಕೈಕೊಟ್ಟು ಬಿಟ್ರಲ್ಲ,
ಕಾಂಗ್ರೆಸ್ಗೂ ಅರ್ಧರ್ಧ, ಜೆಡಿಎಸ್ಗರ್ಧರ್ಧ
ಮಂತ್ರಿ ಸೀಟಲ್ಲು ಉಂಟಂತೆ ಪಾಲು
ಒಟ್ಟಾರೆ ಕನ್ನಡದ ಗೋಳೇ ಗೋಳು...

ಸಿಎಮ್ಮು ಯಾರಾಗ್ಲಿ ದುಡಿಬೇಕು ನೀವೇ
ನಮ್ಮಯ ಊಟವ ಪಡಿಬೇಕು ನಾವೇ...
ಪಕ್ಷಗಳೊಲವು ಕಡಿಮೆಯಾಗಲಿ ನಮ್ಮಲ್ಲಿ
ಚಿಂತೆ ತೊಲಗಿಸೊ ರಾಜಕಾರಿಣಿ  ಇರ್ಲಿ
ಕನ್ನಡ ಜನತೆ ನೆಮ್ಮದಿ ಕಾಣಲಿ.
@ಪ್ರೇಮ್@

308. ನನ್ನ ವಿಮರ್ಷೆ

ಜೀವರಾಜ್ ಸರ್ ರ ಮೃತ್ಯು ನೇತ್ರ ಕವನ ಒಳ್ಳೆಯ ಪರಿಕಲ್ಪನೆಯನ್ನು ಪದಗಳ ಗೂಡಲ್ಲಿ ಕಟ್ಟಿಟ್ಟಿರುವರು.
ಆಶಾಭಾವ, ಕೊನೆಯಲ್ಲಿ ಹಾರೈಕೆ, ಕಳೆದುಕೊಂಡ ಬೇಸರ, ಮತ್ತೆ ಪಡೆಯಲಾಗದ ಹತಾಶೆ, ಕಾರಣರಾದವರ ಮೇಲಿನ ಕೋಪ... ಈ ಎಲ್ಲಾ ಭಾವಗಳು ಎದ್ದು ಬರುವಂತೆ ಸ್ಫುರಿತವಾಗಿವೆ. ಕವಿಭಾವಕ್ಕೆ ಧಕ್ಕೆಯಾಗಿದ್ದರೆ ಮನ್ನಿಸಿ. ಧನ್ಯವಾದಗಳು...

ಶುಕ್ರವಾರ, ಮೇ 18, 2018

304.ಹಾಯ್ಕುಗಳು -ಅತಂತ್ರ

1.

ಮೂರು ಪಕ್ಷ
ನೂರು ಮಾತಿಗೆ ಬೆಲೆ
ಆಳುವನಾರು?

2.

ಧರಿ-ಪುಲಿಯ
ಕಚ್ಚಾಟಕೆ ಜನರು
ಮತಿಗೆಟ್ಟರೇ?

3.

ಮತದಾನದ
ಮಾಯೆಯನು ಅರಿಯೋ
ರಾಜಕಾರಿಣಿ!

4.

ಸೀಟಿಲ್ಲವೇನು?
ನಿನ್ನೊಳಗೇನೋ ಇದೆ
ತಿದ್ದಿಕೋ ಅದ!!

5.
ಮತಗಳಿಕೆ
ಬರದಿರೆ ಇದೆಯು
ನಿನ್ನೊಳು ತಪ್ಪು!!

@ಪ್ರೇಮ್@

305. ಗಝಲ್-17

ಗಝಲ್

ಮನುಜಾ ನೀ ನನ್ನ ಗಿಡ ಮರಗಳ ಕಡಿದಾಗ ನಾ ಮೌನ
ನೀ ನನ್ನೆದೆಯ ತೋಡಿದಾಗ ನಾ ಮೌನ

ನಿನ್ನ ಮಕ್ಕಳು ನನ್ನ ಮೇಲೆ ಕುಣಿದು ಕುಪ್ಪಳಿಸಿ
ಪ್ಲಾಸ್ಟಿಕನು ನನ್ನ ಮೇಲೆ ಬಿಸುಟಾಗ ನಾ ಮೌನ.

ನಿನ್ನ ಕತ್ತಿಯು ಪರಿಸರವ ಕತ್ತರಿಸಿ
ಕಾಂಕ್ರೀಟ ಕಾಡ ಕಟ್ಟುವಾಗ ನಾ ಮೌನ.

ನಿನ್ನ ನೆತ್ತರು ನನ್ನ ಮೇಲೆ ಬಿದ್ದು,
ನೀ ಹೋರಾಡಿ ಸತ್ತಾಗ ನಾ ಮೌನ.

ನಿನ್ನ ಕರಗಳ ಬಳಕೆಯ ವಸ್ತುಗಳು
ನನ್ನ ಮೇಲೆ ಕೊಳೆತು ನಾರುವಾಗ ನಾ ಮೌನ.

ನೀ ಮಳೆ ಬೆಳೆ ನೀರಿಲ್ಲದೆ ಪರದಾಡಿ
ವಲಸೆ ತಿರುಗಿ ನನಗೂ ವಿಷವುಣಿಸಿ ಅದ ನೀನುಣುವಾಗ ನಾ ಮೌನ.

ಪ್ರೇಮದಿ ನನ್ನ ನೋಡದೆ ತಿರುವು ಮುರುವಾಗಿಸುವ
ನಿನ್ನ ಮಂಕು ಬುದ್ಧಿ ನೋಡಿದಾಗ ನಾ ಮೌನ.
@ಪ್ರೇಮ್@

ಬುಧವಾರ, ಮೇ 16, 2018

303. ಗಝಲ್-16

ಗಝಲ್

ಹುಟ್ಟಿ ಬೆಳೆಯುವವರೆಗೆ ಪೋಷಕ ಹೆಸರಿನ ಬಂಧನ
ಬೆಳೆದು ಮದುವೆಯಾದರೆ  ಗಂಡನ ಬಂಧನ

ಹೆಣ್ಣಿಗೆಲ್ಲಿದೆ ಆರಾಮ -ವಿರಾಮದ ನಂಟು
ಜೀವನ ಪೂರ್ತಿ ಅಡಿಗೆ ಮನೆ ಸಾಮಾನಿನ ಬಂಧನ

ಹೊರಗೆ ಕೆಲಸಕೆ ಹೋಗಿ ಬರಲು
ಸಮಾಜದ ಜನತೆಯ ಮಾತಿನ ಬಂಧನ

ಮನೆಯೊಳಗೆ ದುಡಿದು ಗಳಿಸಲು
ಅತ್ತೆ-ಮಾವ ನಾದಿನಿ ಅತ್ತಿಗೆಯ ತುತ್ತಿನ ಬಂಧನ

ಸುಮ್ಮನೆ ಕೂರಲು ಅಸಾಧ್ಯ ಎಂದೊಡೆ
ಹಿರಿಯರ ಕುಹಕ ಮಾತಿನ ಬಂಧನ.

ಹೆಂಡತಿಗೆ ಮೊಣಕಾಲ ಕೆಳಗೆ ಬುದ್ಧಿಯೆನುತ
ಪತಿರಾಯರ ಮದ-ದರ್ಪ ಗತ್ತಿನ ಬಂಧನ.

ಎಷ್ಟೇ ದುಡಿದರೂ ಸಂಸಾರದ ನೊಗಕೆ
ಕತ್ತು ಕೊಟ್ಟು ಎಳೆಯುವ ಕಾನನ ಬಂಧನ

ಸರಿಯಾಗಿ ಸಿಗದು ಕಾತರ- ಆತುರಗಳಿಂದ ಜೀವನದಿ ಕಾಯುವ
ಗಂಡನ ಪ್ರೀತಿ-ಪ್ರೇಮಭರಿತ ಬಾಹುವಿನ ಖುಷಿಯಂಚಿನ ಬಂಧನ!

@ಪ್ರೇಮ್@

ಸೋಮವಾರ, ಮೇ 14, 2018

302. ಗಝಲ್ -18

ಗಝಲ್

ಅಪ್ಪ ಅಮ್ಮನಿಗೆ ಬೈತಾ ಇರುವಾಗ ಮನಸಾಗಿತ್ತು ಮಸಣ
ಅಜ್ಜಿ,ಅತ್ತೆಯರೂ ಅಮ್ಮನನ್ನೆ ತೆಗಳಿದಾಗ ಮನಸಾಗಿತ್ತು ಮಸಣ.

ಮನೆಯಲೆಲ್ಲ ಕೆಲಸ ಮಾಡಿ ಮುಗಿಸದ ಅಮ್ಮ
ಹೊರಗೂ ದುಡಿದ ದಣಿವು ನೋಡಿದಾಗ ಮನಸಾಗಿತ್ತು ಮಸಣ.

ಬಟ್ಟೆ ಒಗೆದು ನೆಲಸಾರಿಸಿ ಪಾತ್ರೆ ತೊಳೆದರೂ
ಎಲ್ಲರಿಂದ ಕೀಳೆನಿಸಿದಾಗ ಮನಸಾಗಿತ್ತು ಮಸಣ.

ಹಗಲಿಡೀ ಬೆವರು ಸುರಿಸಿ ದುಡಿದರೂ
ಸಂಜೆ ಬರುವಾಗ ಕುಡುಕ ಅಪ್ಪನ ಸಂಶಯದ ದೃಷ್ಟಿ ನೋಡಿದಾಗ ಮನಸಾಗಿತ್ತು ಮಸಣ.

ಹರಿದ ಸೀರೆ ಹಳತಾದ ಕುಪ್ಪಸ ನೋಡಿ
ಏನೂ ಅರಿಯದವರಂತಿದ್ದವರ ಕಂಡಾಗ ಮನಸಾಗಿತ್ತು ಮಸಣ.

ಅಮ್ಮನಿಗೆ ಹೆಣ್ಣು ಮಗುವೆಂದು ನನ್ನ
ಜತೆಗೆ ಅಮ್ಮನ ಜರಿದವರ ನೆನೆದಾಗ ಮನಸಾಗಿತ್ತು ಮಸಣ.

ನನಗೂ ಮದುವೆಯಾಗಿ ಪ್ರೇಮ ಸಿಗದೇ ಇದೇ ಅನುಭವಕ್ಕೆ ಬಂದಾಗ
ಪೂರ್ತಿಯಾಗಿ ಅಮ್ಮನ ಪಾಡು ಮರುಕಳಿಸಿದ್ದು ಕಂಡಾಗ ಮನಸಾಗಿತ್ತು ಮಸಣ.
@ಪ್ರೇಮ್@

ಭಾನುವಾರ, ಮೇ 13, 2018

301. ಚೌಚೌಪದಿ

ಚೌಚೌಪದಿ

ಅಮ್ಮನ ಆಸೆ ನಾನು ಶಿಕ್ಷಕಿಯಾಗಬೇಕೆಂದು!
ನಾನೋ ಮರೆಗುಳಿ!!
ಆದರೂ ಶಿಕ್ಷಕಿಯಾಗಿ ವಿದ್ಯಾರ್ಥಿಗಳ ಅಂಧಕಾರ ಮರೆಸಿದೆ!
@ಪ್ರೇಮ್@

ಶುಕ್ರವಾರ, ಮೇ 11, 2018

300. ಭಾವಗೀತೆ-ಮಳೆಯ ಸೇರೋಣ

ವರುಣನ ಸೇರೋಣ

ವರುಣನ ಕುಣಿತಕ್ಕೆ
ಒಳಕುಂತು ನಗಬೇಡಿ
ಭುವಿಯೊಡನೆ ನೀರಾಟ ಆಡಿ
ಎಲ್ರೂನೂ ತಿರೆಯೊಡನೆ ಸ್ನಾನವ ಮಾಡಿ..

ಮಳೆ ಗುಡುಗು ಬರುವಾಗ
ಕೋಲ್ಮಿಂಚು ನಗುವಾಗ
ಫೋಟೋ ತೆಗೆದ್ಹಾಂಗೆ ಮಿಂಚ್ವಾಗ
ಹೊರಗೋಡಿ ಮಳೆ ನೀರಲಿ ನಿಂತು ತಣ್ಣಗಾಗಿ...

ಸೆಕೆಯೇರಿ ಬೆವರಾಗಿ
ಮೈಯೆಲ್ಲಾ ತೊಯ್ದೋಗಿ
ಮನೆಯೊಳಗೆ ಬಿಸಿಯು ಆದಾಗ
ಮಳೆ ನೀರು ತಂಪಾಗಿ ಹೊರಗೆ ಸುರಿದಾಗ...

ಮರಗಿಡಗಳೆಲ್ಲ ಕುಣಿದು
ಕುಪ್ಪಳಿಸಿ ಸೋತ್ಹೋಗಿ
ಸಾಕಪ್ಪ ಎಂದು ಕುಳಿತಾಗ
ನಾವ್ಹೋಗಿ ನರ್ತನವ ಮಾಡಿ ಕುಣಿಯೋಣ..
@ಪ್ರೇಮ್@

299.ವರುಣ-ಕವನ

ವರುಣ

ನಿನ್ನ ನಂಬಿ
ಧರಣಿಯ ಬದುಕು
ನಿನ್ನ ಕಾದು
ರೈತನ ಕನಸು.

ನಿಮ್ಮ ಬಾಳಿಗೆ
ನೀನೇ ಜೀವ
ನಮ್ಮ ಧರೆಗೆ
ನೀನೇ ಮಳೆ..

ಬಂಗಾರಕ್ಕಿಂತಲೂ
ಮುಖ್ಯ ಜಲ
ಕುಡಿಯಲು ತೊಳೆಯಲು
ಬದುಕಲು ಬಲ.

ಭುವಿಯಲಿ ನಲಿವು
ನೀನಿದ್ದೆಡೆ ಗೆಲುವು
ನೀನಿರದೆ ಹೋದರೆ
ಎಲ್ಲಿದೆ ಬಲವು..
@ಪ್ರೇಮ್@

ಗುರುವಾರ, ಮೇ 10, 2018

298.ಚುನಾವಣೆ ಹಾಯ್ಕುಗಳು

ಹಾಯ್ಕುಗಳು

ಚುನಾವಣೆ

1.
ಚುನಾವಣೆಯು
ಪ್ರಜೆಗಳಿಂದ ಪ್ರಜೆ
ಗೆಲ್ಲುವ ಕ್ರಮ

2.
ಓಟನು ಮಾರಿ
ನೋಟನು ಪಡೆಯಲು
ಬೇಡವೊ ತಮ್ಮ..

3.
ಓಟಿನ ಹಕ್ಕು
ನಿನ್ನದೆ ತಿಳಿದುಕೋ
ಮಾರಲು ಬೇಡ.

4.
ನೋಟಿಗಾಗಿಯೇ
ಓಟು ನೀಡ ಬೇಡಣ್ಣಾ
ಯೋಚಿಸಿ ಹಾಕು..

5.
ಖಂಡಿತ ಇಂದು
ಮತವನು ಹಾಕಲು
ಮರೆಯ ಬೇಡಿ!

6.
ಮತದಾರನೇ
ನೀ ಏನಾದರೂ ಮಾಡ
ಬಲ್ಲ ಹಕ್ಕಿದೆ

...
.

@ಪ್ರೇಮ್@

ಮಂಗಳವಾರ, ಮೇ 8, 2018

297. ನನ್ನವ್ವ-ಕವನ

ನನ್ನಮ್ಮ

ನನ್ನ ಮನದ
ಬೇರು ಇವಳು
ನನ್ನ ಎದೆಯ
ಉಸಿರು ಇವಳು

ನನ್ನ ಬಾಳ
ಬುತ್ತಿ ಇವಳು
ನನ್ನ ಬದುಕ
ತೊಟ್ಟಿಳಿವಳು

ನನ್ನ ಗುರುವು
ನನ್ನ ಗುರಿಯು
ನನ್ನ ಉಸಿರು
ನನ್ನ ಹಸಿರು

ನನ್ನ ಬಾಳು
ನನ್ನ ನಿದಿರೆ
ನನ್ನ ದೇಹ
ಮನವು ಇವಳು..
@ಪ್ರೇಮ್@

296. ಭಾವಗೀತೆ- ಬದುಕ ಗಾನ

ಸ್ಪರ್ಧೆಗಾಗಿ

ಶೀರ್ಷಿಕೆ-ಬದುಕ ಸಂಗೀತ

ಬಾಳಲೆಂದು ಬಣ್ಣಬಣ್ಣದ
ಸಂಗೀತವು ಸಾರುತಿರಲಿ
ಬದುಕ ಬವಣೆ ನೀಗಿ ನೀಗಿ
ಪದಗಳ ಸಾಲು ಉಕ್ಕಿ ಬರಲಿ..

ನಿಂತ ನೆಲವು ತಾನೆ ತಾನು
ಜನಕೆ ಉಣಿಸು ನೀಡುತಿರಲಿ
ಭುವಿಯು ರವಿಯ ಸೇರಿಕೊಂಡು
ಜೀವ ಜಗವ ಜೀಕುತಿರಲಿ...

ಮನದ ತುಂಬ ಸಹಾಯವೆಂಬ
ಹೃದಯದುಸಿರು ಚಿಮ್ಮುತಿರಲಿ
ಬಾಳ ಗಾನ ಮೀಟಿ ಮೀಟಿ
ಜೋಗುಳವೂ ಹೊಮ್ಮಿ ಬರಲಿ

ಭವ್ಯತೆಯ ಬದುಕಿನಲ್ಲಿ ನಲಿವ
ನಾಟ್ಯದ ನಾದಗಾನ ಹೊಮ್ಮಲಿ
ನಿತ್ಯ ನಿರತ ನವ್ಯ ನಲಿವು
ನೋವು ಎಲ್ಲ ನಲಿವು ತರಲಿ...

@ಪ್ರೇಮ್@

295. ಮಾತೆಯರ ದಿನಕ್ಕೆ ಕವನ

ತಾಯಂದಿರ ದಿನಕ್ಕೆ

ಅಮ್ಮನಿಗೆ

ಅಮ್ಮ ನಿನ್ನ ಕಂದ ನಾನು
ನನ್ನ ಹೆಡೆದು ಪಡೆದೆ ನೀನು
ಮುದ್ದು ಮಾಡಿ ಲಲ್ಲೆಗರೆದು
ತಿನ್ನಿಸುತ್ತ ಪ್ರೀತಿಯೆರೆದು

ನನ್ನ ಬದುಕ ರೂಪಿಸಿದ್ದು
ವಿದ್ಯೆ ಬುದ್ಧಿ ಕಲಿಸಿ ಕೊಟ್ಟು
ಬಾಳ ದಾರಿಯನ್ನು ತಂದಿಟ್ಟು
ಮಾತೆ ನೀನೆ ಸಾಕುತಿದ್ದು

ದನಿಯದಂತೆ ಬದುಕುತಿದ್ದು
ದ್ರವ್ಯವೆಲ್ಲ ನನಗೆ ಕೊಟ್ಟು
ನನ್ನ ದಾರಿಯ ತೋರಿಸಿಕೊಟ್ಟು
ನೀನೆ ನನ್ನ ದೃಷ್ಟಿಬೊಟ್ಟು...

ಅಮ್ಮ ನೀನೆ ನನ್ನ ಗುರು
ನಿನ್ನಿಂದಲೆ ಬದುಕು ಶುರು
ನೀನಲ್ಲವೆ ನನ್ನ ಸದ್ಗುರು
ನಾವು ನಿನಗೆ ಎಂದೂ ಬದ್ಧರು.

@ಪ್ರೇಮ್@

ಸೋಮವಾರ, ಮೇ 7, 2018

294. ಕವನ-ನಂಬಿಕೆಯ ಬದುಕು

293.ಕವನ-ಬಾಳಹಣತೆ

ಬಾಳ ಹಣತೆ

ದೀಪವೊಂದು ತಾನೆ ಉರಿದು
ಜಗಕೆ ಬೆಳಕ ನೀಡುತಲಿದ್ದು
ನಮ್ಮ ಬದುಕು ಹಾಗೆಯಿರಲಿ
ಪರರಿಗೆ ಹಿತವಾಗುತಲಿರಲಿ..

ಹಣತೆ ತಾನು ಬೆಳಗುತಲಿರಲು
ತನ್ನ ಮೈಗೇ ಶಾಖ ಬರಲು
ಯಾರ ಮನೆಯು ಬೆಳಗುವುದೋ
ಯಾರ ಮನವು ಅರಳುವುದೋ..

ನಮ್ಮ ಬದುಕು ನಮಗೇ ಅಲ್ಲ
ಇತರರಿಗೂ ಸಹಾಯ ಬೇಕು ಅಲ್ವಾ
ನಮ್ಮ ಬದುಕು ನಾಲ್ಕೆ ದಿನಕೆ
ನಾಲ್ಕರಲ್ಲಿ ಸಹಾಯ ಬರಲಿ ಜನಮನಕೆ..

ಬಾಳ ದೀವಿಗೆ ಆರೋ ಮೊದಲು
ಬದುಕ ಬಾವುಟ ಏರಿ ಬರಲು
ಬಿಸಿಲ ದಗೆಯು ಬಂದರೂ
ಜೀವ ಉಳಿಸಿ ಪೊರೆಯಬೇಕು ಸೂರ್ಯನಂತೆ...
@ಪ್ರೇಮ್@

ಭಾನುವಾರ, ಮೇ 6, 2018

292.ಭಾವಗೀತೆ-ಬರಡಾದ ಭೂಮಿ

ಬರಡಾದ ಭೂಮಿ

ಬರಡಾದ ಭುವಿಯಿಂದು
ನಿಟ್ಟುಸಿರ ಬಿಡುತಿಹುದು
ಭವಣೆಯಿಂದ ಬಸವಳಿದು
ಬೆಂಡಾಗಿ ಬಳಲಿಹುದು...

ಭಯದಿ ತಾ ಬದುಕುತಿಹುದು
ಭಕುತರನು ಪೊರೆದಿಹುದು
ಭಯಾನಕ ಮನುಜರ
ಬರ್ಭರಕ್ಕೆ ಭಯಪಡುತಿಹುದು..

ಬಾಳ ಬಂಡಿ ಬಡಿಯುತಿಹುದು
ಬಾನ ಭಾನು ಉರಿಯುತಿಹನು
ಬಯಲು ಬೆತ್ತಲಾಗಿಹುದು
ಬೇಟೆ ಭೇಟಿ ನೀಡಿಹುದು

ಬುಗುರಿಯಂತೆ ತಿರುಗಿದರೂ
ಬಟಾ ಬಯಲು ಎಲ್ಲೆಡೆ
ಬರಹದಲ್ಲಿ ಬರೆಯುವರು
ಬಳಿಯೆ ಉಳಿಸಲಾರರು..
@ಪ್ರೇಮ್@

291. ಕವನ-ಓಟಿನ ಕಾರ್ಯ

ಇರುವೆ ನಾ ಎಲೆಕ್ಷನ್ ಟ್ರೈನಿಂಗಲಿ

ಬರುವರು ಜನರು
ಕೋಣೆಯ ಹುಡುಕುತ
ಬರುವರು ತಮ್ಮಯ
ಸಂಖ್ಯೆಯ ಅರಸುತ..

ಅಂಚೆಯ ಮತದ
ಗಲಿಬಿಲಿ ಒಂದೆಡೆ
ಬರದವರ ಹುಡುಕುವ
ಕಲಕಲ ಹಲವೆಡೆ...

ವಾಶ್ ರೂಂ ನೀರಿನ
ಕಷ್ಟವು ಹಲವೆಡೆ
ಊಟಕು ನೀರಿಗೂ
ಕ್ಯೂ ಇಹುದೆಲ್ಲೆಡೆ...

ಸೆಕೆಯಲಿ ಬೆವತು
ವಿಧಾನವ ಕಲಿತು
ನೋಡಿ ಕಲಿತು
ಮಾಡಿ ತಿಳಿದು...

ಕೇಳಿದ್ದೆ ಕೇಳಿ
ಕಲಿತದ್ದೆ ಕಲಿತು
ಎಲೆಕ್ಷನ್ ಕಾರ್ಯವ
ಜೈಸಿ ಕೊಡುವರು...
@ಪ್ರೇಮ್@

290.ಕವನ-ಸಹೋದರನಿಗೆ

ಪ್ರೀತಿಯ ತಮ್ಮನಿಗೆ

ಸಮಾಜ ಸೇವೆಗೆ ಹೆಸರಾಗಿ
ಜನಮನದ ಮಲ್ಲಿಗೆಯಾಗಿ
ಬಡವ ಬಲ್ಲವಗೆ ನೆರಳಾಗಿ
ಬಾಳು ನೀ ನೂರಾರು ವರುಷ ಹಾಯಾಗಿ..

ಸರ್ವ ಜನಕೆ ಹಿತವನು ನೀ ಮಾಡಿ
ತಂಗಿಯರ ಗೆಳೆತನ,ಪ್ರೀತಿ ಕಾಪಾಡಿ
ಮನದ ಬಾಗಿಲ ಸಮಾಜಕೆ ದೂಡಿ
ಸಿಗಲಿ ನಿನಗೆ ಒಳ್ಳೆಯ ಜೋಡಿ...

ಮಕ್ಕಳ ಮುದ್ದಿನ ಮಾಮ ನೀ
ಅಕ್ಕಂದಿರ ಪ್ರೀತಿಯ ತಮ್ಮ ನೀ
ತಂಗಿಯರಿಗೆ ಬೇಕಾದ ಅಣ್ಣ ನೀ
ಸಂತಸದಿ ಎಂದೆಂದು ಬಾಳು ನೀ...

ಬಣ್ಣ ಬಣ್ಣದ ಕನಸಾಗಲಿ ನನಸು
ಸುಖ ದುಃಖಗಳ ಸಮನಾಗಿ ಎದುರಿಸು
ಒಂದೆ ಮನದಿ ಸರ್ವರ ಹರಸು
ಇಗೋ ಈ ಅಕ್ಕನ ಆಶೀರ್ವಾದ ಸ್ವೀಕರಿಸು..
@ಪ್ರೇಮ್@

289.ಲಘುಬರಹ-3. ಮೊಬೈಲು ಪುರಾಣ

ಲಘುಬರಹ-3

ಮೊಬೈಲು ಪುರಾಣ

ಮೊಬೈಲು ಬಗ್ಗೆ ಬರೆಯೋದೇನಿದೆ? ಅದೇನಂತ ಎಲ್ಲರಿಗೂ ಗೊತ್ತು! ಅಲ್ಲವೇ?ಆದರೆ ಕೆಲವೊಂದು ವಿಚಾರಗಳಿವೆ ನೋಡಿ!
   ಮೊಬೈಲ್ ಬಂದ ಹೊಸತರಲ್ಲಿ ಯಾರದಾದರೂ ಪ್ಯಾಕೆಟ್ ಒಳಗಿನಿಂದ ಮೊಬೈಲ್ ರಿಂಗಣಿಸಿದರೆ ಸಾಕು, ಜನರೆಲ್ಲ ಅವನ ಕಡೆಗೇ ನೋಡ್ತಾ ಇದ್ರು ಹೆಮ್ಮೆಯಿಂದ! ಅದೂ ಹುಡುಗಿಯರೆಲ್ಲಾ ಕಣ್ ಕಣ್ ಬಿಟ್ಟು ಅವನನ್ನೇ ಎವೆಯಿಕ್ಕದೆ ನೋಡೋರು! ಆದರೆ ಅವನಿಗೋ ತೋರಿಸಿಕೊಳ್ಳೋ ಗೀಳು! ಜೋರಾಗಿ ಎಲ್ಲಾರ್ಗೂ ಕೇಳೋ ತರಹ ತನ್ನ ಕಾರ್ಯಗಳ ಬಗ್ಗೆ ಮಾತಾಡಿ ಫೋನ್ ಕಟ್ ಆದ ಮೇಲೆ ಸುತ್ತ ನೋಡ್ತಾ ಇದ್ದ ಹೆಮ್ಮೆಯಿಂದ!
   ಆದ್ರೆ ಈಗ ಹಾಗಲ್ಲ, ನಾಯಿ ಕೈಲೂ ಮೊಬೈಲಿದೆ ಅನ್ನೋ ಹಾಗೆ ಅದರ ಸೌಂಡ್ ಎಷ್ಟೇ ಚೆನ್ನಾಗಿರಲಿ,ಎಷ್ಟೇ ಒಳ್ಳೆ ಹಾಡಾಗಿರಲಿ,ಶಬ್ದದ ತೀವ್ರತೆ ಒಂದು ಡೆಸಿಬಲ್ ಹೆಚ್ಚಾಗಿದ್ರೂ ಜನ ಕೆಕ್ಕರಿಸಿ,'ಪ್ರಪಂಚದಲ್ಲಿ ಇವ ಒಬ್ಬನ್ಹತ್ರ ಮಾತ್ರ ಮೊಬೈಲ್ ಇರೋದಾ?' ಅನ್ನೋ ತರಹ ನೋಡ್ತಾರೆ!! ಅವರ ನೋಟ 'ಇಡೀ ಊರವ್ರಿಗಾ, ಇವನೊಬ್ನಿಗಾ ಫೋನ್ ಬಂದಿರೋದು' ಅನ್ನೋ ತರಹ ಇರುತ್ತೆ! ಇನ್ನು ಜೋರಾಗಿ ಮಾತಾಡಿದ್ರೆ ಮುಗಿದೇ ಹೋಯ್ತು,'ಅಣ್ಣಾ ಸ್ವಲ್ಪ ನಿಧಾನ!' ಅಂತಾರೆ! ಇನ್ನು ಗಂಟೆಗಟ್ಟಲೆ ಮಾತಾಡ್ತಾ ಇದ್ದವನನ್ನು ನೋಡಿದ್ರೆ 'ಪುಂಡಿ,  ಕೆಲ್ಸ ಇಲ್ದಿರೋ ಸೋಮಾರಿ' ಅಂತ ಪಟ್ಟ ಕಟ್ಟಿ ಬಿಡ್ತಾರೆ! ಹುಡ್ಗೀರೋ.. ಇಯರ್ ಫೋನ್ ಹಾಕ್ಕೊಂಡು ಪಕ್ಕದಲ್ಲೆ ಕೂತವ್ರಿಗೂ ಕೇಳ್ಬಾರ್ದು ಅಷ್ಟು ಮೆಲ್ಲ ಮಾತಾಡ್ತಿರ್ತಾರೆ!
     ಇದೆಲ್ಲ ಮಾತಾಡೋ ವಿಷ್ಯ ಆಯ್ತು. ಇನ್ನು ಸ್ವಲ್ಪ ಮಾಡರ್ನ್ ವಿಷಯಕ್ಕೆ ಬರೋಣ! ಈಗ ಫೋನ್ ಹಿಡ್ಕೊಂಡು ಜೋರು ಜೋರಾಗಿ ಮಾತನಾಡಿ, ವಿಷಯ ಡಿಸ್ಕಸ್ ಮಾಡಿ, ನಿಧಾನವಾಗಿ ಕುಳಿತು ಪರಿಹರಿಸಿಕೊಳ್ಳುವಷ್ಟು ಸಮಯ ಜನರಿಗಿಲ್ಲ! ಅದಕ್ಕೆ ಜನರೆಲ್ಲ ಸಾಮಾಜಿಕ ಜಾಲ ತಾಣಗಳ ಹಿಂದೆ ಬಿದ್ದಿದ್ದಾರೆ! ಅರ್ಕುಟ್ ನಲ್ಲಿ ಫೋಟೋ ಮಾತ್ರ ಕಳುಹಿಸಿ ಅದನ್ನು ನೋಡುತ್ತಿದ್ದ ಜನರ ಕೈಯಲ್ಲೇ ಜಗತ್ತಿದೆ ಈಗ! ಪ್ರಪಂಚವೆಲ್ಲಾ ಎಜುಕೇಟೆಡ್(ದುನಿಯಾ). ಹಾಗಾಗಿ ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್, ವಾಟ್ಸಪ್, ವಿ -ಚಾಟ್, ಟೆಲಿಗ್ರಾಂ,ಹೈಕ್,ಮೆಸೆಂಜರ್, ಟ್ವಿಟರ್,ಇಂಸ್ಟ್ರಾಗ್ರಾಂಗಳಲ್ಲೆ ಜನರ ಮಾತುಕತೆ!
    ನೋಡಬೇಕು ಅನಿಸಿದಾಗೆಲ್ಲ ವೀಡಿಯೋ ಕಾಲ್! ಇನ್ನು ಪಕ್ಕದಲ್ಲೆ ಕುಳಿತವರ, ಹತ್ತಿರದ ಮನೆಯವರ ಪರಿಚಯ ಯಾರಿಗೂ ಇಲ್ಲ! ಬೇಡವೂ ಕೂಡಾ..ಬದಲಾಗಿ ಕಾಂಟ್ಯಾಕ್ಟ್ ಎಲ್ಲಾ ಫೋನಲ್ಲೆ! ಫೋನಿಲ್ದೆ ಜಗವಿಲ್ಲ. ವಾರಗಟ್ಟಲೆ ಕಾಯೋ ಚಿಂತೆಯಿಲ್ಲ. ಈಗಂತೂ ಯೂಟ್ಯೂಬಿದೆ. ಪ್ರಪಂಚದ ಯಾವ ಮೂಲೆಗೆ ಹೋದ್ರೂ ನಮ್ಮ ಊರಿನ, ನಮ್ಮ ಭಾಷೆಯ ಕಾರ್ಯಕ್ರಮ,ಯಕ್ಷಗಾನ, ಚಲನಚಿತ್ರ ಹೀಗೆ ನಮಗೆ ಬೇಕಾದ ಆಡಿಯೋ,ವಿಡಿಯೋಗಳು ಅದರಲ್ಲಿವೆ. ಅದಕ್ಕಾಗೇ ಅದು ಅಷ್ಟು ಪ್ರಖ್ಯಾತವಾಗಿದೆ!!
    ಆದರೆ ನಮಗೆ ಗೊತ್ತಿಲ್ಲದೆ ನಾವೇನೋ ಸಂಬಂಧಗಳಿಂದ ದೂರಾನೇ ಉಳಿದು ಬಿಡುತ್ತೇವೇನೋ? ಮನೆಗೆ ಬಂದ ಬಂಧು-ಅತಿಥಿಗಳೊಡನೆ ಹಿಂದಿನಂತೆ ಹರಟಲು ಈಗಿನ ಮಕ್ಕಳಿಗೂ ಹಿರಿಯರಿಗೂ ಸಮಯವಿಲ್ಲ!  ಇಂದಿನ ತಾಯಂದಿರಿಗೂ, ಅಜ್ಜಿಯರಿಗೂ ಧಾರಾವಾಹಿಗಳ ಪಾತ್ರಗಳ ಚಿಂತೆಯಾದರೆ ತಂದೆಗೆ ರಾಜಕೀಯ,ಫ್ರೆಂಡ್ಸ್,ಪಾರ್ಟಿ,ಬ್ಯುಸಿನೆಸ್,ಮೇಂಟೆನೆಂಸ್ ಚಿಂತೆ! ಮಕ್ಕಳು ಲ್ಯಾಪ್ ಟಾಪ್,ಮೊಬೈಲ್ ಗೇಮ್ಸ್, ಆನ್ ಲೈನ್ ಶಾಪಿಂಗ್, ಸಾಮಾಜಿಕ ಜಾಲ ತಾಣಗಳಲ್ಲಿ ಬ್ಯುಸಿ! ಬರ್ತ್ ಡೇ ಪಾರ್ಟಿ, ಮದುವೆ, ಗೃಹಪ್ರವೇಶ, ಆ್ಯನಿವರ್ಸರಿ ವಿಷ್ ಎಲ್ಲಾ ಅಲ್ಲೆ! ಇನ್ನು ಬೇರೆ ಕೆಲಸ ಮಾಡಲು ಟೈಮೇ ಇಲ್ಲ! ದಿನಕ್ಕೆ ಬಂದ ಸಾವಿರಾರು ಮೆಸೇಜ್ ಗಳಿಗೆ ರಿಪ್ಲೇ ಮಾಡೋದು ಬೇಡವೇ? ಇನ್ನೆಲ್ಲಿ ಮಾತು,ಕತೆ,ಹರಟೆ? ತಂದೆ,ತಾಯಿ ಮಾತನಾಡುವಾಗ ಸಿಟ್ಟು ಬರುತ್ತದೆ. ಯಾರೂ ಬುದ್ಧಿ ಹೇಳ್ಬಾರ್ದು! ನೀನು ಮಾಡಿದ್ದೆ ಸರಿಯೆನಬೇಕು.. ಇಲ್ಲಾ ಅಂದ್ರೆ.. ಇದೆಯಲ್ಲ 4098... ಸಾಯ್ತೇನೆ ಅನ್ನೋ ಟ್ರಿಕ್! ಹೆದರುವ ಪೋಷಕರನ್ನು ಬಗ್ಗಿಸಲು ಅಷ್ಟು ಸಾಕು! ಕಣ್ಣಿನ ಡಾಕ್ಟರಿಗೆ, ಕನ್ನಡಕದ ಅಂಗಡಿಯವರಿಗೆ ಪುರುಸೊತ್ತೇ ಇಲ್ಲ! ಕೆಲಸ, ಉಪಯೋಗ ಕಣ್ಣು ಬೆರಳುಗಳಿಗೆ ಮಾತ್ರ!
     ಹಿಂದೊಂದು ಕಾಲವಿತ್ತು,ಅರ್ಜೆಂಟಿನವ ಕಾಲ್ ಮಾಡಿ "ಶೆಟ್ರೆ ಬರ್ಕೊಳ್ಳಿ, ಸಾಮಾನು ಚೀಟಿ ,ಅರ್ಧ ಗಂಟೇಲಿ ಬರ್ತೇನೆ,ಕಟ್ಟಿಡಿ,1ಕೆಜಿ ಸಕ್ಕರೆ,2ಕೆಜಿ ಬೆಲ್ಲ,ಅರ್ಧ ಕೆಜಿ ಚಾಹುಡಿ..." ಅಂತ ಈ ಕಡೆಯವನ ಮಾತಿಗೂ ಕಾಯದೆ ಫೋನಿಟ್ಟು ಬಿಡುವುದು! ಆಗಾಗ ರಾಂಗ್ ಕಾಲ್ ಮಾಡಿ, 'ಇದು ಗೋವಿಂದ ಭಟ್ರಾ, ಇದು ನಾಟಿ ಔಷಧಿ ನಾರಾಯಣ್ ಭಟ್ರಾ?' ಎಂದೆಲ್ಲ ಕೇಳಿ ತಲೆಕೆಡಿಸ್ಕೊಳ್ಳೋ ಕಾಲ ಈಗ ಹೋಗಿದೆ. ಟ್ರೂ ಕಾಲರ್ ಬಂದಿದೆ. ಆ ಕಡೆಯಿಂದ ಕಾಲ್ ಮಾಡಿದ್ದು ಯಾರು, ಅವ ಎಲ್ಲಿದ್ದಾನೆ, ಕರೆ ಸ್ವೀಕರಿಸ ಬೇಕೇ,ಬೇಡವೇ ಅದು ತಿಳಿಸುತ್ತದೆ! ಮುಂದೊಂದು ದಿನ ಕರೆ ಮಾಡುವವರ ಆಧಾರ್ ನಂಬರ್ ಜೊತೆ ಫೋಟೋ ಸಮೇತ, ಅವರಿರುವ ಜಿಪಿಎಸ್ ಮ್ಯಾಪ್ ನೊಂದಿಗೆ ಕಂಡರೂ ಅಚ್ಚರಿಯಿಲ್ಲ! ಆಫೀಸ್ ವರ್ಕ್ ಎಂದು ಬಾರಿಗೆ ಹೋದ ಅಣ್ಣಂದಿರೆಲ್ಲ ಹಾಗೆಯೇ ದೇವಸ್ಥಾನಕ್ಕೆಂದು ಹೊಸ ಸೀರೆ ತರಲು ಹೋದ ಅಕ್ಕಂದಿರೆಲ್ಲ ಸಿಕ್ಕಿ ಹಾಕಿಕೊಳ್ಳುವುದು ಗ್ಯಾರಂಟಿ!
   ಫೋನ್ ಮಿಸ್ ಯೂಸ್ ಆಗಬಾರದು ಎಂಬ ನಿಯಮದಿಂದ ನೆಟ್ ಸ್ಪೀಡ್ ಕಟ್ ಆದರೂ ಅದೆಲ್ಲ ಹಳ್ಳಿಯ ಜನರಿಗೆ ಮಾತ್ರ ಅನ್ವಯಿಸುವುದಲ್ಲವೇ? ಹೇಳಿ ಕೇಳಿ ಮನುಷ್ಯ ಸಂಚಾರಿ ಜೀವಿ! ಮೊಬೈಲ್ ಹಿಡ್ಕೊಂಡು ಕೆಲಸಕ್ಕೆಂದು ಸಿಟಿಗೆ ಹೋದರಾಯಿತು! ಮನುಷ್ಯನ ತಲೆಯಲ್ಲಿ ಬಹಳವೇ ಬುದ್ಧಿ ಇದೆ ತಾನೇ? ಏನಿಲ್ಲ ಮೊಬೈಲ್ನೊಳಗೆ? ಗಡಿಯಾರ,ದಿಕ್ಸೂಚಿ,ಅಲಾರಂ,ಕ್ಯಾಮರಾ, ಕ್ಯಾಲೆಂಡರ್,ಭವಿಷ್ಯ, ಟಿ.ವಿ, ರೇಡಿಯೋ, ಆಡಿಯೋ ಪ್ಲೇಯರ್, ಡಿಕ್ಸ್ ನರಿ, ಆಟಗಳು,ಸಂಗೀತ ಸಾಧನಗಳು, ಪದ್ಯ, ಸ್ಕ್ಯಾನರ್, ರೆಕಾರ್ಡರ್,ಮ್ಯಾಪ್, ಬ್ಯಾಂಕ್.... !!! ಎಷ್ಟು ಕಂಪನಿಗಳಿಗೆ ನಷ್ಟ ಲೆಕ್ಕಹಾಕಿ!!!
   ಮನೆಯಲ್ಲೆ ಕುಳಿತು ಕಂಪ್ಯೂಟರ್ನಲ್ಲಿ ಮಾಡಬಹುದಾದ ಎಲ್ಲಾ ಕೆಲಸಗಳನ್ನೂ ಫೋನಲ್ಲೆ ಮಾಡಿಕೊಳ್ಳಬಹುದು. ಕಟ್ಟಿಂಗ್ ಶಾಪ್, ವಾಶ್ ರೂಂ ಬಿಟ್ಟರೆ ನೀವು ಮತ್ತೆಲ್ಲೂ ಹೋಗಬೇಕಾಗಿಲ್ಲ! ಕಾಲ ಬದಲಾಗಿದೆ, ಜನ, ಜನರ ಕೈಲಿರುವ ಮೊಬೈಲ್ ಕೂಡಾ!! ನೀವೇನಂತೀರಿ?
@ಪ್ರೇಮ್@

288. ಕವನ-ಬಣ್ಣ

ಬಣ್ಣವೆಂದರೇನು?

ಕನಸ ಕಾಣುವೆನು
ಅಮ್ಮ ದೇವರ ಬಗೆಗೆ
ಮನಸ ಒಳಗೆಲ್ಲ
ಯೋಚನೆ ಅವಳ ಬಗ್ಗೆ..

ಜನ ಮಾತನಾಡುವರು
ವಿವಿಧ ಬಣ್ಣಗಳ ಬಗ್ಗೆ
ಕಾಣದೆನಗೆ ಹೇಳಮ್ಮ
ವಿವರಿಸು ಬಣ್ಣಗಳ ಬಗೆಗೆ..

ಏಸುವಿನ ಮಕ್ಕಳಿಗೆ
ಬಿಳಿಯು ಪ್ರಿಯವಂತೆ
ಕುರಾನಿಗೆ ಪರಿಸರದ
ಹಸಿರ ಒಲವಂತೆ

ಸನ್ಯಾಸಿ,ಸಾಧುಗಳಿಗೆ
ಕೇಸರಿಯೆ ಬೇಕಂತೆ
ಮಹಿಳೆಯರಿಗೆ ಪಾಪ
ಕಪ್ಪಂಗಿ ಬರ್ಕವಂತೆ..

'ಹೇಳಬಾರದು ಮಗು
ಕೇಳಿದ್ದೆಲ್ಲ ನುಂಗಬೇಕು
ಅದೆಲ್ಲ ಅವರವರ ಧರ್ಮ
ಅಡ್ಡಿಪಡಿಸಲಾಗದು ನಾವು'

ಸರಿಯಮ್ಮ ನೀನಂದೆ
ದೇವರು ಒಬ್ಬನೇ
ಬಣ್ಣವಿಲ್ಲ ಅವನಿಗೆ
ಮತ್ತೇಕೆ ಹೀಗೆ..

'ಜಗವೆ ಹೀಗೆ ಮಗು
ಬಣ್ಣ ಬದಲಾಯಿಸುವುದು
ಬೆಳಗ್ಗೆ ಕೆಂಪು ಸಂಜೆ ಕೇಸರಿ
ಮಳೆಗಾಲದಿ ಹಸಿರು

ಬೇಸಿಗೆಯಲಿ ಒಣ ಧೂಳು
ಚಳಿಗಾಲದಿ ಮಂದ
ಪ್ರಕೃತಿಯೇ ಹೀಗೆ
ವಿವರಿಸಲಾರೆ ನಿನಗೆ'

ಬೇಡಮ್ಮ ನಾನು
ನಾನಾಗೆ ಇರುವೆ
ಬಿಳಿ ಕಪ್ಪು ನನಗೆ
ತಿಳಿದಿರುವುದೇ ಸಾಕು!!
@ಪ್ರೇಮ್@