ಶನಿವಾರ, ಸೆಪ್ಟೆಂಬರ್ 25, 2021

ಸಿದ್ಧಲಿಂಗಯ್ಯ ಅವರ ನೆನಪಿನಲ್ಲಿ

ಕವಿ ನಮನ
ಸಿದ್ದಲಿಂಗಯ್ಯ ಅವರ ನೆನಪಿನಲ್ಲಿ...

ಕವನ

ನೀನಾದೆ ಪ್ರೇರಣೆ

ಇಕ್ರಲಾ ಒದಿರ್ಲ ಎಂದ ಮೇಧಾವಿಯೇ
ಇದ್ದುದ ಇದ್ದುದನು ಸಾರಿ ಗಂಡೆದೆ ಮೆರೆದ ಕವಿಯೇ
ತನ್ನವರ ಮೇಲೆತ್ತಿ ಊರು ಕೇರಿಯಲಿ ಬರೆದ ಗುರುವೇ
ಜನಗಳ ಕಷ್ಟವನು ಹಿಡಿದೆತ್ತಿ ನಿಲ್ಲಿಸಿದ ವರವೇ..

ಹಲವು ಕವಿಗಳಿಗೆ ನೀನಾದೆ ಪ್ರೇರಕ
ಕೆಲವು ಮನಗಳಿಗೆ ನೀನಾದೆ ನಾಯಕ
ದಲಿತ ಬಂಡಾಯ ಸಾಹಿತ್ಯದ ಪ್ರೇರಕ
ಪದ- ನುಡಿಗಳು ಬದುಕಿಗೆ ಪೂರಕ..

ಸಾಹಿತ್ಯಕ್ಕೆ ಬರೆದೆ ನೀ ಹೊಸದಾದ ಭಾಷ್ಯ
ಜನರ ಕಷ್ಟಗಳಿಗೆ ಪೂರಕವಾದ ವಿಷಯ!
ದುಡಿತದ ಕೈಗಳಿಗೆ ಇದೆ ಅಲ್ಲಿ ಪದಗಳ ಕಷಾಯ!
ದು:ಖಿತರಿಗೆ ದಲಿತರಿಗೆ ನೊಂದವರಿಗೆ   ಬರಲಿ ಜಯ!

 ಹಪಹಪಸುತ್ತಿರುವ ನೋವಿನ ಕರುಳಿಗೆ ಸ್ಪಂದನೆ
ನೀನೇ ಹಲವು ಬರಹಗಳಿಗೆ ನಿಜ ಪ್ರೇರಣೆ
ನಿನಗಿತ್ತು ಕಲ್ಲು ಮುಳ್ಳು ದಾರಿಯಲಿ ನಡೆವ ಸಹನೆ.
ಎಲೆ ಕರುನಾಡ ಕಂದನೆ ನಿನಗೆ ವಂದನೆ.
@ಪ್ರೇಮ್@
02.07.2021

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ