ಭಾವಗೀತೆ
ಒಂದಾಗಿ ಬಾಳೋಣ
ನಮ್ಮ ನಮ್ಮ ಒಳಗೇಕೆ
ಜಾತಿ ಮತದ ಜಗಳ!
ಸುಮ್ಮನಿರದೆ ಸಾಯುವರು
ನಿತ್ಯ ಜನರು ಬಹಳ//
ಅವರು ಇವರ ಮಾತು ಕೇಳಿ
ಹೊಡೆತ ಇರಿತ ಬೇಕೆ!
ಸವರುವಂಥ ಸಾವಿಗಿಲ್ಲಿ
ಜಾತಿ ಧರ್ಮ ಏಕೆ!
ಕೊಲೆ ದರೋಡೆ ನಾಲ್ಕೇ ದಿನ
ಹೊರಟ ಯಾತ್ರೆ ತಾನೇ!
ನಾಲ್ಕು ದಿನದ ಬಾಳುವೆಗೆ
ಸಾವಿರಾರು ಬೇನೆ!//
ಅಲ್ಲಿ ಇಲ್ಲಿ ಸರ್ವ ಜನಕು
ನೋವಿನದೇ ಬಾಳು
ಯಾರಿಗಿಲ್ಲ ಸಾವು ನೋವು
ಎಲ್ಲಾ ಒಂದೇ ಗೋಳು//
@ಹನಿಬಿಂದು@
17.05.2025
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ