ಗಝಲ್
ನನ್ನ ನೋವನೆಲ್ಲಾ ಹಂಚಿಕೊಳ್ಳುವವರಿಲ್ಲ ಎಂದು ಕೊರಗಬೇಡ ಮನವೇ
ನಿನ್ನಾತ್ಮ ನಿನ್ನೊಳಿಹುದು ಗುರುವಾಗಿ ಗೆಲುವಾಗಿ ಅಳುಕಬೇಡ ಮನವೇ
ಮೋಸ ವಂಚನೆ ಹೊಟ್ಟೆಕಿಚ್ಚು ತುಂಬಿಹುದು ಈ ಜಗದಲಿ ಇಂದು
ಜೊತೆಗೆ ಒಳ್ಳೆಯತನ ಬಯಸುವ ಜನಗಳ ಕೊರತೆ ಇರದು ಇಲ್ಲಿ, ಅಂಜಬೇಡ ಮನವೇ
ದಾರಿಯಲಿ ನಡೆವಾಗ ಕಲ್ಲು ಮುಳ್ಳುಗಳಲಿ ಎಡವುದು ಸಹಜವೇ
ಬಿದ್ದರೂ ಮತ್ತೆ ಎದ್ದು ನಿನ್ನ ನೀನೇ ಹುರಿದುಂಬಿಸು, ಹೆದರಬೇಡ ಮನವೇ
ಮಳೆಗಾಲ ಚಳಿಗಾಲ ಬೇಸಿಗೆ ಕಾಲಗಳಾಗಿ ಬದಲಾಗುವುದು ಕ್ಷಣವು
ಬರಗಾಲ ಬದಲಾವಣೆ ಬದುಕಲಿ ಬರುವುದು ಸಹಜ, ನಡುಗಬೇಡ ಮನವೇ
ಹನಿ ಹನಿ ಸೇರಿದರೆ ತುಂಬುವುದು ಕೆರೆ ಕೊಳವು ಬಾಳ ಬಯಲಲಿ
ಹನಿಬಿಂದುವಿನಲಿದೆ ಧೈರ್ಯ ಸ್ಥೈರ್ಯ ಮುನ್ನುಗ್ಗುವ ಹೃದಯ, ಬಿಡಬೇಡ ಮನವೇ..
@ಹನಿಬಿಂದು@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ