ವಿದ್ವತ್ಪೂರ್ಣ
ವಂದನೆ ನಿನಗೆಂದು ಬಿನ್ನಹಗೈದೊಡೆ
ಕಂದನೆ ಆದರೂ ವರಕೊಡುವೆ.
ಚಂದದ ಭಕ್ತಿಗೆ ಮೆಚ್ಚುಗೆಯಾಗಿ
ಅಂದದ ಜೀವನ ಪಾಲಿಸುವೆ.
ದ್ವಂದದ ಮನದಲಿ ಬಕುತಿಯು ಬಾರದು
ಗಂಧವ ಹಣೆಯಲಿ ಧರಿಸಿದರೂ
ಮಂದದ ಬುದ್ಧಿಗೆ ಸಾಣೆಯ ಹಚ್ಚಲು
ಇಂಧನ ತಯಾರು ಮೆದುಳಿನಲಿ..
ಬಂಧನ ಯಾರಿಗೂ ಬೇಡವು ಜಗದಲಿ
ಒಂದನೆ ತರಗತಿ ಮಕ್ಕಳಿಗೂ
ಪಂದ್ಯವ ಕಟ್ಟುತ ಓಡಲುಬೇಕು
ವಂದ್ಯದ ಬದುಕಿನ ನಾವೆಯಲಿ..
ವೈದ್ಯರ ಪಾತ್ರವು ಬಹಳವೇ ಹಿರಿದು
ವಿದ್ಯೆಯ ಕಲಿತವ ಮೇಲವನು
ಸುದ್ದಿಯ ಹಂಚುತ ಬಾಳುವ ಮನುಜನು
ಗೆದ್ದಲಿನಂತೆಯೆ ಇರುವವನು
@ಪ್ರೇಮ್@
17.04.2020
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ