ಶನಿವಾರ, ಆಗಸ್ಟ್ 1, 2020

ಲೇಖನ

ನನಗಿಷ್ಟವಾದ ಪುರಾಣದ ಸ್ತ್ರೀ ಪಾತ್ರ

       ಪುರಾಣಗಳು ನಮ್ಮಜೀವನವನ್ನು ತಿದ್ದಿಕೊಳ್ಳಲಿಕ್ಕಿರುವ ಪುರಾವೆಗಳು. ಸತ್ಯ-ಅಸತ್ಯ, ನ್ಯಾಯ-ಅನ್ಯಾಯ, ಧರ್ಮ-ಅಧರ್ಮಗಳ ವ್ಯತ್ಯಾಸ ತಿಳಿಸಿ ಬದುಕನ್ನು ಹೇಗೆ ಸ್ವೀಕರಿಸಬೇಕೆನುವ ತಂತ್ರಗಳನ್ನು ಅಲ್ಲಿನ ಪ್ರತಿಯೊಂದು ಪಾತ್ರಗಳೂ ನಮಗೆ ಕಲಿಸಿ ಕೊಡುತ್ತವೆ. ಅಂತಹ ಮಹಾನ್ ಪಾತ್ರಗಳಲ್ಲಿ ರಾಮಾಯಣದ ಊರ್ಮಿಳೆಯ ಪಾತ್ರ ನನಗೆ ತುಂಬಾ ಹಿಡಿಸಿದ ಪಾತ್ರ.
    ರಾಣಿಯಾಗಿದ್ದರೂ ರಾಣಿ ಪಟ್ಟ ಸಿಗದ, ಐಶ್ವರ್ಯವಿದ್ದರೂ ಅನುಭವಿಸಲಾಗದ, ಗಂಡನಿದ್ದರೂ ಒಂಟಿಯಾಗಿ ಬದುಕಿದ, ಅರಮನೆಯಲ್ಲೂ ನೆಮ್ಮದಿ ಕಾಣದ ತಬ್ಬಲಿ ಬದುಕು ಊರ್ಮಿಳೆಯದ್ದು. 
     ರಾಮ, ಲಕ್ಷ್ಮಣ, ಸೀತೆಯರನ್ನು ಹೊಗಳಿ ಪೂಜಿಸುವವರೇ ಎಲ್ಲರೂ. ತನ್ನ ಜೀವಮಾನವಿಡೀ ತ್ಯಾಗಮಯಿಯಾಗಿ ಬದುಕಿದ ಊರ್ಮಿಳೆ ಯಾರ ಕಣ್ಣಿಗೂ ಬೀಳಲೇ ಇಲ್ಲ. 

   ವನವಾಸದಲ್ಲೂ ಸೀತೆಯೊಡನೆ ರಾಮನಿದ್ದ. ಆದರೆ ಲಕ್ಷ್ಮಣ ತನ್ನ ಜೀವನವಿಡೀ ರಾಮ-ಸೀತೆಯರ ರಕ್ಷಣೆಯಲ್ಲಿ ತೊಡಗಿದ್ದನೇ ಹೊರತು ತನ್ನ ಸತಿಗೇನು ಬೇಕು, ಅವಳ ಆಸೆಗಳೇನು, ತನ್ನ ನಿರೀಕ್ಷೆಗಳೇನು, ಆಸೆಗಳೇನು ಎಂಬ ಯಾವುದನ್ನೂ ಯಾವತ್ತೂ ಆಲಿಸುವತ್ತ ಗಮನವೇ ಕೊಡಲಿಲ್ಲ. ತನ್ನ ಆಸೆ, ಆಕಾಂಕ್ಷೆಗಳನ್ನೆಲ್ಲಾ ಬದಿಗೊತ್ತಿ ತನ್ನ ಜೀವನವನ್ನೇ ತ್ಯಾಗಕ್ಕೆ  ಮುಡಿಪಾಗಿಟ್ಟ ಊರ್ಮಿಳೆಗೆ ಹ್ಯಾಟ್ಸಪ್.
   @ಪ್ರೇಮ್@
13.07.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ