ಶನಿವಾರ, ಆಗಸ್ಟ್ 15, 2020

ಏಕೀತರ

ಏಕೀತರ

ನಿನ್ನೆಯಿದ್ದ ದೇಶಭಕ್ತಿ ಇಂದಿಲ್ಲವೇಕೆ?
ಒಂದೇ ದಿನಕ್ಕದನು ಮಿತಿಗೊಳಿಸಿದುದೇಕೆ?
ನಿನ್ನೆ ಕೈಲಿದ್ದ ಬಾವುಟ ಕಸದ ಬುಟ್ಟಿ ಸೇರಿದ್ದೇಕೆ?
ನಿನ್ನೆ ಮಾತ್ರ ತ್ರಿವರ್ಣದ ಧಿರಿಸೇತಕೆ?

ಭಾರತಾಂಬೆಯ ಅದ್ಭುತ ಕಿಡಿಗಳಲ್ಲವೇ ನಾವು?
ದೇಶಭಕ್ತಿಯ ಕಿಚ್ಚು ಪ್ರತಿಕ್ಷಣ ಉಕ್ಕಬೇಕಲ್ಲವೇ?
ಮಾತೆಯಾಗಿ ಜೀವ ಬಲಿದಾನಕೆ  ಸಿದ್ಧರಿರಬೇಕು.
ದೇಶ ಕಾಯುವ ಯೋಧರಿಗೆ ಜೊತೆಯಾಗಬೇಕು.

ಮನದಲಿ ದೇಶಪ್ರೇಮ ನಿತ್ಯವಿರಬೇಕು
ತಂದೆ ತಾಯಿಯನೂ ಅಂತೆಯೇ ಗೌರವಿಸಬೇಕು.
ಅವರ ವೃದ್ಧಾಶ್ರಮಕೆ ದೂಕುವ ನಾವು
ಭಾರತ ಮಾತೆಯ ಅದಾವ ಪರಿಯಲಿ ನೋಡಿಕೊಳ್ಳಬಲ್ಲೆವು?

ನಮ್ಮ ಮೇಲೇ ನಮಗಿಲ್ಲ ಕಾಳಜಿ
ಮೊಬೈಲಿಗೆ ಕೊಡುವಷ್ಟು ಸಮಯ ಮಕ್ಕಳಿಗೆ ಕೊಡಲಾರೆವು
ಮನೆಮಂದಿಯ ಜೊತೆ ಕುಳಿತು ಹರಟಲಾರೆವು
ಸರ್ವಂ ಸಾಮಾಜಿಕ ಜಾಲತಾಣಮಯ
ದೇಶಭಕ್ತಿಯೂ ಕೂಡಾ!
ಮುಂದೊಂದು ದಿನ ಆನ್ ಲೈನಿನಲೇ ಧ್ವಜ ಹಾರಿಸುವೆವೇನೋ!

ಭಾರತಮಾತೆ ಅದೆಂದು ಹೇಳಬಲ್ಲಳು ನಾ ಧನ್ಯೆಯೆಂದು?
ಪ್ರತಿ ಭಾರತೀಯನ ಮನ ಉದ್ಧಾರವಾಗುವುದೆಂದು?
ತನ್ನ ಕಾರ್ಯಗಳ ತಾನೇ ಮಾಡುತ ಮುಂದುವರೆವುದೆಂದು?
ಸಮಯ ನುಂಗುವ ಮೊಮೈಲಿನಾಟದ ಹುಚ್ಚನು ಕಡೆಗೊಳಿಸುವುದೆಂದು?
@ಪ್ರೇಮ್@
16.08.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ