ಮಂಗಳವಾರ, ಜುಲೈ 27, 2021

ಕುಬುದ್ಧಿ ಗೆಲ್ಲುವುದೆ?

ಕುಬುದ್ಧಿ ಗೆಲುವುದೆ?

ಹುಟ್ಟಿನಿಂದಲೂ ಸಾವಿನವರೆಗೂ
ಕೆಟ್ಟದ್ದೇ ಮಾಡುತ್ತಾ ಬಂದ ದುರ್ಯೋಧನ!
ಪಾಂಡವರಿಗೆ ಸಿಗಬೇಕಾದ ರಾಜ್ಯ ಕೊಡದೆ!
ಮೋಸದಿ ಸೋಲಿಸಿ, ಪತ್ನಿಯ ಹಂಗಿಸಿ
ಇದ್ದ ರಾಜ್ಯವ ಕಿತ್ತುಕೊಂಡು, ಕಾಡು ಭೂಮಿಯ ಕೊಟ್ಟು!

ಆದರೂ ಎದೆಗುಂದದೆ ದೇವರ ಕೃಪೆಯಲ್ಲಿ ಬದುಕಿದರು ಐವರು
ಅವಮಾನ ಅಪಮಾನ ಎಲ್ಲವ ಸಹಿಸಿ
ಅರ್ಧ ರಾಜ್ಯ ಬೇಡ ಒಂದು ಹಳ್ಳಿಯಾದರೂ ಕೊಡೆನುತ ವಿನಂತಿಸಿದರು
ನರಬಲವ ಉಡುಗಿಸಿದ, ಮಾತಲ್ಲೇ ಕಟ್ಟಿ ಹಾಕಿದ
ಸತ್ಯ ಧರ್ಮವ ಪರೀಕ್ಷಿಸಿದ
ತಾ ಮೆರೆದ! ಜಗತ್ತಿಗೆ ಹಠವ ಸಾರಿದ
ಸರ್ವರ ದೃಷ್ಟಿಯಲ್ಲಿ ಹಠಕ್ಕೆ ಸಾರಥಿಯಾಗಿ ನಿಂತ
ತಾನೇ ಹೀರೊ ಆದ!
ಅವ ಮಾಡಿದ್ದೇ ಸರಿ ಎಂದರು ಜನರು!
ಅವನ ಹೊಗಳಿ ಅಟ್ಟಕ್ಕೇರಿಸಿದರು!

ಹೇಳಿ, ಈ ಜಗತ್ತಿನಲ್ಲಿ ಹೀರೋ ಎನಿಸಿಕೊಳ್ಳಲು ಕೆಟ್ಟದ್ದನ್ನೇ ಮಾಡಬೇಕೇ?
ತನ್ನ ಹಠವ ಸಾಧಿಸಲು ಪರರ ಬಲಿ ಪಡೆದವನೆ ಯೋಗ್ಯನೆ?
ಪರರ ನೋಯಿಸಿ ಬದುಕ ಕಟ್ಟಿದ ಹಟಮಾರಿಯೇ ಸರ್ವೋತ್ತಮನೆ?
ಸತ್ಯ, ಧರ್ಮ, ನ್ಯಾಯಪರತೆಗೆ ಬೆಲೆಯೇ ಇಲ್ಲವೇ?
ಹೀರೋಗಳ ಮರೆತು ವಿಲನ್ ಗಳೆ ದೇಶವಾಳುವ ದೇಶವೇ ನಮ್ಮದು?
ಸತ್ಯವಂತರಿಗೆ ಕಾಲವೇ ಇಲ್ಲವೇ ಇಂದು?
ದುಡ್ಡಿದ್ದವ, ಶಕ್ತಿ ಇದ್ದವ, ಆಸ್ತಿವಂತನೇ ದೊಡ್ಡಪ್ಪನೆ!

ಅತ್ಯಾಚಾರ, ಕೊಲೆ, ಸುಲಿಗೆ, ಅನ್ಯಾಯ, ಅನಾಚಾರ, ದಬ್ಬಾಳಿಕೆ, ದೂರ್ತತನಕ್ಕೆ,ನೋವು ಕೊಟ್ಟು ನಗುವ ಅಟ್ಟಹಾಸಕ್ಕೆ ಕೊನೆಯೇ ಇಲ್ಲವೇ?
ಅಂಥವನ ಹಿಂದೆಯೇ ಬಾಲ ಮುದುರಿ ಓಡಾಡುವ ಜನಕ್ಕೆ, 
ಅವನನ್ನೇ ದೇವರೆಂದು ಆರಾಧಿಸುವ ಕುಲಕ್ಕೆ , ಈ ಅಂಧಕಾರಕ್ಕೆ ಕೊನೆಯೆಂದು?
ಕೆಟ್ಟದು ಮಾಡಿ ಗೆದ್ದವನೇ ನಾಯಕನೇ?
@ಪ್ರೇಮ್@
28.07.2021

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ