*ನವ ಭಾವ*
ಓದದೇ ಬರೆಯಲದು ವ್ಯರ್ಥವೆನುವರು ಜನರು
ಓದಿ ಬರೆದಾಗ ಸಾಹಿತ್ಯ ತೂಕವಂತೆ
ಬದುಕ ಪ್ರತ್ಯಕ್ಷ ಅನುಭವವದು ಓದಿಗಿಂತಲೂ ಶ್ರೇಷ್ಠ
ಬದುಕ ಓದಿದವ ಬರೆಯಬಲ್ಲ ಗಟ್ಟಿ
ಬರವಣಿಗೆ ಪದಗಳ ಒಟ್ಟು ಮುದ್ದೆಯಲ್ಲ
ಅದು ಬಾಳಿನ ಅನುಭವದ ಚಿನ್ನದ ಗಟ್ಟಿ
ಓದಿಗಿಂತಲೂ ಹೆಚ್ಚು ಅನುಭವದ ಸಾರ
ನೋವುಂಡ ಜೀವಕೆ ಬಾರದೆ ಪದಗಳ ರಾಶಿ
ಮನದ ನೋವನು ಬಿತ್ತಲು ಗದ್ದೆ ಸಾಹಿತ್ಯ ಕ್ಷೇತ್ರ
ತನು ಮನವ ಹಸನುಗೊಳಿಸಿ..
ಮತ್ತೆ ಮುಂದಿನ ಬದುಕಿಗೆನ್ನ ಒರೆ ಹಚ್ಚಿ ಸರಿಪಡಿಸೆ
ನವ ಭಾವ ಹುಟ್ಟುತ ಮಾಡಿಹುದು ಮೋಡಿ
ನೋವಿನಲೆಯಲು ಹೊಸ ಭಾವ ಹುಟ್ಟಲದು
ಕಾರಣವು ಸಾಹಿತ್ಯದೊಲವ ಮಳೆಯು
ಹನಿ ಹನಿಯ ಬೀಳುತಿರೆ ತುಂಬುವುದು ಸಾಗರವು
ಬದುಕ ನಾವೆಯು ಅಲ್ಲಿ ತೇಲುತಿರಲಿ
ಉದಕದಂತೆಯೆ ಬಣ್ಣರಹಿತ ತಿಳಿಯಾದ ಕ್ಷಣಗಳು ಬರಲಿ
ಮುತ್ತು ಆಕಾಶದಿಂದುದುರಿದಂತೆ ಹೊಸ ಹೊಸ ಭಾವಗಳು ಚಿಮ್ಮಿ ಬಂದು ಬಾಳು ಬೆಳಗಲಿ...
@ಪ್ರೇಮ್@
25.07.2021
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ