ಗಝಲ್
ಮಾತಿನಲೂ ಮೌನವಿದೆ ಗೆಳತಿ ಕಣ್ಣಿಂದ ಇಣುಕುವ ಹನಿ ಕಣ್ಣೀರಲಿ..
ಗೀತೆಯಲೂ ನೋವಿದೆ ಒಡತಿ ಮಣ್ಣಿಂದ ದೊರೆಯುವ ತುಸು ಪಟ್ಟದಲಿ..
ಬಾಸುಮತಿಯಂತೆ ರುಚಿಯಿರಬಹುದು ಬಾಳೆಂದು ಬಗೆದೆ ನಾ ಅಂದು!
ಬಾಸುಂಡೆ ಬಂದಂತೆ ಇಹುದೆಂಬ ಪರಿವೆ ಇರಲಿಲ್ಲ ನಿಜ ಜೀವದಲಿ..
ಮರೆವು ಕೆಟ್ಟದು ಎಂದು ಹೇಳುತಲಿದ್ದರು ಹಿರಿಯರೆನಗೆ ನಿತ್ಯವೂ
ಮರೆತ ಸಾಲುಗಳೇ ಪರಮ ಮಿತ್ರರೆಂದು ಅರಿವಾಯಿತು ಹೊರ ಜಗದಲಿ...
ಗಗನದಲಿ ಗೂಡು ಕಟ್ಟಿದ್ದವು ಮೋಡಗಳು ತಣ್ಣಗೆ ತಮ್ಮಷ್ಟಕ್ಕೆ ತಾವು!
ಉದುರಿದವು ಹನಿಯಾಗಿ ಮುತ್ತಿನ ಮಣಿಯಾಗಿ ನವಿರಾಗಿ ಬಲವಾಗಿ ಸಣ್ಣ ಬಿಂದುವಲಿ..
ಮರದೊಳಗೆ ಅದೆಲ್ಲಿ ಹುದುಗಿತ್ತು ರುಚಿಯಾದ ಹಣ್ಣಿನ ಸಿಹಿಯು?
ಕನಿಕರದ ನಂಬಿಕೆಯ ಪ್ರೀತಿಯ ನಿಸ್ವಾರ್ಥದ ಮೋಸವಿರದ ಸರಿ ಗೆಳೆತನದಲಿ.
ಬಡಬಾಗ್ನಿ ಎದೆಯೊಳಗೆ ನಿದ್ದೆಯಾದರೂ ಹೇಗೆ ತಾನೇ ಅಡಿಯಿಟ್ಟೀತು ಮಂಚದೊಳಗೆ?
ಸುಡು ಸುಡುವ ಪನ್ನೀರು ವೇಗದಿ ಜಾರಿ ಬೀಳುತಳಿ ಕೆನ್ನೆ ಅಂಚಿನಲಿ..
ಪುಸ್ತಕದಿ ಬರೆದದ್ದು ಓದಿದ್ದು ಗೀಚಿದ್ದು ನೆನಪಿಲ್ಲ ಕ್ಲಾಸಿನಲಿ ಅಂದು!
ಪ್ರೇಮ ಪತ್ರವ ಬರೆದು ಸಿಕ್ಕಿ ಹಾಕಿಕೊಂಡಿರುವುದು ಸತ್ಯ ಗುರುವಿನಲಿ!
@ಪ್ರೇಮ್@
15.10.2021
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ