ಸೋಮವಾರ, ಜನವರಿ 20, 2025

ಸತ್ವಯುತ ಬದುಕು

ಸತ್ವಯುತ ಬದುಕು

ಸತ್ವವೇ ಇಲ್ಲದೆ ಹೋದರೆ ಏನಿದೆ
ಬದುಕಿನ ತುಂಬಾ ಸಪ್ಪೆ
ಮಿತೃತ್ವದಲ್ಲೂ ನಿತ್ಯ ನಿರಂತರ
ಕೆದಕದೆ ತೆಗೆಯದೆ ಸಿಪ್ಪೆ

ಭಾಷಾ ಪ್ರೌಢಿಮೆ ಬೇಕದು ಮನಕೆ
ಸಾಹಿತ್ಯ ಗುರಿಯ ಶಿಖರಕ್ಕೆ
ಕಾಸು ಕೊಟ್ಟರೂ ಜ್ಞಾನ ದೊರಕದು
ಓದಿನ ಅಂಶದ ಲಾಭಕ್ಕೆ

ನಾಟ್ಯ ನೃತ್ಯ ನಟನಾ ಕೌಶಲ
ಅಭ್ಯಾಸದಿಂದ ಹೆಚ್ಚುವುದು
ಪಠ್ಯ ವಸ್ತುವಿನ ನಿಜ ಮನನ
ನಿತ್ಯ ಕಲಿಕೆಯಿಂದ ಆಗುವುದು

ದೇಶದ ಸಂಸ್ಕೃತಿ ಸಂಪತ್ತು ಬೆಳೆಯಲು
ಕೋಶದ ಜ್ಞಾನವೂ ಬೇಕಲ್ಲ
ವೇಷ ಕಟ್ಟುತ ಸುಮ್ಮನೆ ತಿರುಗಲು 
ಸತ್ವವು ಎಲ್ಲೂ ಸಾಲಲ್ಲ

ಓದು ,ಬರಹ , ಅಭ್ಯಾಸ, ನೆನಪು
ಎಲ್ಲವೂ ಬೇಕು ಜ್ಞಾನಕ್ಕೆ
ಸತ್ವವ ಉಳಿಸಿ ಬೆಳೆಸಲು ಹೋರಾಟ
ಭಾರತ ದೇಶದ  ಉದ್ಧಾರಕ್ಕೆ..
@ಹನಿಬಿಂದು@
19.01.2024

ಪ್ರೇಮಾ ಆರ್ ಶೆಟ್ಟಿ 
ಎಂ.ಎ. ಬಿ.ಎಡ್
ಸಹ ಶಿಕ್ಷಕರು 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ