ದಶಕ -121
ಮಾನವತೆ ಸತ್ತಿಹುದು ದಾನವರ ಜಗದೊಳಗೆ
ಕಾಣಿಸರು ಸತ್ಯ, ಧರ್ಮ, ನ್ಯಾಯ ನೀತಿಯೊಳಗೆ
ಬೇಕು ಈಗ ಇಂದೇ ಎಲ್ಲ, ಬೆಲೆಯೆಂಬುದಿಲ್ಲ ನಾಳೆಗೆ
ಪರರತ್ತ ಕೀಳಾಗಿ ಹರಿದಿಹುದು ಹರಿತದ ನಾಲಗೆ!
ಸತ್ಯ ಸುಳ್ಳಿನ ನಡುವೆ ಸೆಣಸುತಿಹ ಈ ಬಾಳ್ವೆ
ಪಥ್ಯ ಮಾಡಲು ಬೇಡ ರುಚಿಯೇ ದೈವ ಆಸೆಗೆ
ಇಲ್ಲ ತಾಳ್ಮೆ, ಧರ್ಮದ ಆಚರಣೆ, ಎಲ್ಲವೂ ನಾವೇ
ಕೆಟ್ಟತನಕೆ ಬರಲಿಹುದು ಒಂದು ದಿನ ಕೊಳಕು ಸಾವೇ
ಇನ್ನಾದರೂ ಒಂದು ಚೂರು ಪುಣ್ಯ ಸಂಪಾದಿಸೋಣ
ಸತ್ಯ ನ್ಯಾಯ ಧರ್ಮದ ಬಾಳಿಗೆ ನಿತ್ಯ ಶರಣಾಗೋಣ
@ಹನಿಬಿಂದು@
13.01.2025
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ