ಇಂದು
ಒಂದು ಎರಡು ಸಾಲದು
ಬಂದು ಬರಡು ಆಗದು
ಸಿಂಧುವಿನ ಚಿಲುಮೆಯಿದು
ಮುಂದೆ ದಾರಿ ತಿಳಿಯದು
ನಂದು ನಿಂದು ಬಗೆಯದು
ಸಂದು ಗೊಂದು ತುಂಬದು
ಕಂದು ಬಣ್ಣ ಕಾಫಿಯದ್ದು
ಮಿಂದು ಆರೋಗ್ಯವೆಂದೂ ಕೆಡದು
ಗೊಂದು ಅಂಟಿ ಬಿಡುವುದು
ನೊಂದು ಸಾವು ಸಲ್ಲದು
ತಂದು ಸುರಿದು ಮುಗಿಯದು
ದುಂದು ವೆಚ್ಚ ಮಾಡಬಾರದು
ಬಂದು ನೋಡು ತಿಳಿವುದು
ಬಿಂದು ಇಲ್ಲದೆ ಏನಿಹುದು
ಮಂದ ಬುದ್ಧಿ ಇರಬಾರದು
ಅಂದು ಬದುಕು ನಿರಾಳವಿಹುದು
ಅಂದುಕೊಂಡೆ ಬಾಳುತಿಹುದು
ಇಂದು ಜನರ ಜ್ಞಾನ ಬೆಳೆದು
ಹಿಂದು ಮುಂದು ಗಮನಿಪುದು
ಎಂದೂ ಬುದ್ದಿ ಬಳಸುವುದು
@ಹನಿಬಿಂದು@
29.11.2025
ಶುಕ್ರವಾರ, ನವೆಂಬರ್ 28, 2025
ಇಂದು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ