ಮಂಗಳವಾರ, ಸೆಪ್ಟೆಂಬರ್ 15, 2020

ಬದುಕು

ಬದುಕು

ಭ್ರಮೆಯಲಿ ಬದುಕುವ ಬದುಕದು ಬಾಡುವ ಸುಮದಂತಲ್ಲವೇ ಬುವಿಯಲ್ಲಿ?
ಬಂಧನ ಬೇಡವು ಬೇಸರ ಬರದಿರೆ ಭಯವದು ಬರಬಾರದು ಬದುಕಿನಲಿ..

ಬಾಡದೆ ಇರಲಿ ಹೂವಿನ ಹಾಗೆ ಭವಿತವ್ಯದ ಭಂಡಾರ ಕನಸುಗಳು
ಭೋರ್ಗರೆಯುವ ಜಲಧಿಯ ತೆರದಿ ಬೊಬ್ಬಿರಿಯುತಲಿವೆ ಭಾವಗಳು!

ಬೇರಿನ ತುದಿಯದು ನೀರಾಹಾರವ ಹೀರುವ ಹಾಗಿದೆ ಜೀವನ ಕ್ಷಣವು
ಬೇಗೆಯು ನಿತ್ಯವೂ ಬೆಂಬಿಡದೆ ಕಾಡಿದೆ ಬಾಳಿಲಿ ಬೇಕದು ಸಂಯಮವು..

ಬೀಜವ ಹಾಕಿ ಗಿಡವನು ನೆಟ್ಟೊಡೆ ಹಣ್ಣನು ಸೇವಿಪರುಂಟೇನು ಜಗದಲಿ?
ಬೇರಿನ ಮೇಲೆ, ಕೆಳಗಡೆ ಕೂಡ, ಗೊಬ್ಬರ ನೀರನು ಹಾಕುವುದಲ್ಲದೆ ಪಾಲನೆ ಪೋಷಣೆ ಕಲಿ ರೈತನಲಿ!

ಬವಣೆಯು ಇರದೆ ಬದಲಾವಣೆ ಇರದು ಭವದ ಭಾಗ್ಯದ ಬಲೆಯಲ್ಲಿ
ಬೂರುಗ ಹೂವಿನ ಹಾಗೆಯೇ ಪರಿಮಳ ಸಮಾಜ ಸೇವೆಯ ಕೈಯಲ್ಲಿ..

ಬೊಗಳೆಯ ಬಿಡುತಲಿ ಬೇಡುವ ಜನರದು ಬಳಗವೇ ಇಹುದು ನಾಡಿನಲಿ
ಬೇಸರಗೊಳ್ಳದೆ ಪ್ರೀತಿಯ ಮನದಲಿ ಬಾಳಲು ಕಲಿ ನೀ ಬದುಕಿನಲಿ..
@ಪ್ರೇಮ್@
14.09.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ