ಗಝಲ್
ಅಂಧಕಾರದ ಜಗದಲಿ ಜ್ಞಾನದ ಬತ್ತಿಯನು ನಗೆಯ ಎಣ್ಣೆಯಲ್ಲಿ ಅದ್ದಬೇಕು ಮನವೇ
ಮಂದಮತಿಯ ತಲೆಯ ಆಳದಿಂದ ದುರ್ಬುದ್ಧಿಗಳೆಲ್ಲ ಪಟಾಕಿಯ ಹಾಗೆ ಸುಡಬೇಕು ಮನವೇ
ಸ್ನೇಹದ ಹಣತೆ ಸರ್ವೆಡೆ ಉರಿದು ಎಲ್ಲರ ಎದೆಯಲಿ ಕುಣಿಯುತ್ತಾ ಬೆಳಗಬೇಕು
ಮೋಹದ ಪಾಶ, ಸೋಲಿನ ವಿನಾಶ, ಬದುಕಿನಿಂದ ನಿರಂತರ ಸಾಯಬೇಕು ಮನವೇ
ಮೋಸ, ವಂಚನೆ, ನೋವು, ಕಷ್ಟ, ದುಃಖ, ಬೇಸರಗಳು ಶಾಶ್ವತವಾಗಿ ನಾಶವಾಗಬೇಕು
ಕರುಣೆ, ದಯೆ, ನಿಷ್ಕಲ್ಮಶ ಹೃದಯಗಳು ನಕ್ಷತ್ರಗಳಂತೆ ಅಮರವಾಗಬೇಕು ಮನವೇ..
ದುರಾಸೆಯೆಂಬ ಹಣ್ಣು ಹಣ್ಣು ಮುದುಕ ಬಾರದ ಊರಿಗೆ ಮರಳಿ ಬಾರದಂತೆ ಸಾಗಲಿ
ದುಷ್ಟತನವೆಂಬ ಕಪಟತನದ ನೀಚ, ನಯವಂಚಕ ಉಸಿರು ಕೊನೆಯಾಗಿ ಸಾಯಬೇಕು ಮನವೇ
ಮುದ್ದಿನ ಮದ್ದ ನೀಡುವ ಸಹಾಯಕ ಕರಗಳು ಅಜರಾಮರವಾಗಿ ಬೆಳೆಯಬೇಕು
ಕದ್ದು ಮೆದ್ದು ಹಲವರ ನುಂಗುವ ರಾಕ್ಷಸ ಹಸ್ತಗಳ ಗಗನಕ್ಕೆ ಎಸೆಯಬೇಕು ಮನವೇ..
ಭಕ್ತಿ, ಸ್ಪೂರ್ತಿ, ನೀತಿ,ಕೀರ್ತಿಯೆಂಬ ದನಕರುಗಳಿಗೆ ನಿರಂತರ ಪೂಜೆಗಳು ನಡೆಯಬೇಕು
ದಾನ - ಧರ್ಮ, ಶಾಂತಿ, ಮುಕ್ತಿ ಕೊಡುವ ಕೈಗಳಿಗೆ ತೀರ್ಥ ಪ್ರಸಾದ ಹಾಕಬೇಕು ಮನವೇ...
ಸುಡುಮದ್ದಿನ ಹೂವು ಆಗಸದಲ್ಲಿ ಅರಳುವಂತೆ ಕಠೋರ ಮಾತಿನ ಪ್ರೇಮ ನಗಬೇಕು
ಲಕ್ಷ್ಮಿ ಪಟಾಕಿ ಸಿಡಿವಂತೆ ಸಕಲ ಎದೆ ಗೂಡಿನ ದ್ವೇಷವೆಲ್ಲ ಒಡೆದು ನುಚ್ಚು ನೂರಾಗಬೇಕು ಮನವೇ..
@ಪ್ರೇಮ್@
05.11.2021
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ