ಸೋಮವಾರ, ಜುಲೈ 23, 2018

383.ನ್ಯಾನೋ ಕತೆ-5

1.ನ್ಯಾನೋ ಕತೆ

ಅಜ್ಞಾನ

ಸ್ವಲ್ಪ ವರುಷಗಳ ಹಿಂದಿನ ಕತೆ. ಆಗಿನ್ನೂ ಮೊಬೈಲ್ ಹಳ್ಳಿಗಳಿಗೆ ಬಂದಿರಲಿಲ್ಲ. ಚಿಲ್ಲರೆ(ಕಾಯಿನ್) ಫೋನ್ ಕಾಲ. ಜನ ಕಾಯಿನ್ ಹಿಡಿದು ಕ್ಯೂ ನಿಲ್ಲುತ್ತಿದ್ದರು. ಲವರ್ಸ್ ಲೆಕ್ಕ ಇಲ್ಲದಷ್ಟು ಕಾಯಿನ್ ಕಳೆದುಕೊಳ್ಳುತ್ತಿದ್ದರು. ರಾಮಣ್ಣ ಅಲ್ಲಿ ಬಂದು ಕಾಯಿನ್ ಹಾಕಿ ನಂಬರ್ ಒತ್ತಿದರು. ಅತ್ತಕಡೆಯಿಂದ ಮಹಿಳೆಯ ಧ್ವನಿ ಬಂತು, "ನೀವು ಕರೆ ಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ". "ಅಮ್ಮಅವನು ಒಳ ಬಂದ ಕೂಡಲೇ ನನ್ನಿಂದ ಪಡೆದ ಸಾಲ ರೂ.೧೦,೦೦೦ ವನ್ನು ಇಂದೇ ತಂದು ಕೊಡಲು ಹೇಳಿ" ರಾಮಣ್ಣ ಹೇಳಿ ಫೋನಿಟ್ಟರು! 'ಟಣ್' ಅಂತ ಕಾಯಿನ್ ಕೆಳಗೆ ಬಿತ್ತು! "ದೇವೇಗೌಡರ ಮಗ ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿ ಇದೊಂದು ಒಳ್ಳೆ ಕೆಲಸ ಮಾಡಿದ್ದಾರೆ. ಫೋನ್ ಫ್ರೀ" ಎನ್ನುತ್ತಾ ಮನೆಗೆ ನಡೆದರು ರಾಮಣ್ಣ!!!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ