ಹಾಯ್ಕುಗಳು
1.
ಮನಸಿನಲ್ಲಿ
ನೆನೆವುದೆಲ್ಲ ಸತ್ಯ
ಆಗಿರಬೇಕು!
2.
ಕನಸಿನಲ್ಲಿ
ಬರುವ ಹುಡುಗಿಗೆ
ತಂದೆ ತಾಯಿಲ್ಲ!
3.
ಮರದ ಬೇರು
ಕಡಿಯಲಾಗಲಿಲ್ಲ
ನರ ಮಾನವ!
4.
ತಂದೆ ತಾಯಿಯು
ದೇವರೆಂದರು ಆಗ
ಈಗ ಕರ್ತವ್ಯ!
5.
ಕ್ರಾಂತಿ ಕವನ
ಕವಿಗೆ ಸಾಕೆ ಎಂದೂ?
ಶಾಂತಿ ಬೇಡವೇ!
6.
ನಾದ ಗೀತೆಗೆ
ತಾಳ ಹಾಕಲು ನೀನು
ಜತೆಗೆ ಬಾರೇ..
7.
ಮೌನ ಕ್ರಾಂತಿ
ಜೋರು ಜಗಳಕ್ಕಿಂತ
ಹೆಚ್ಚು ಹಾಳಲ್ವ?
8.
ಮರಕಡಿದು
ಗಿಡ ನೆಟ್ಟು ಬೆಳೆಸಿ
ನೀರೆರೆದರು!
9.
ಹನಿಹನಿಯ
ಹಳ್ಳ ತುಂಬಿ ತುಳುಕಿ
ನದಿಯಾಯಿತು!
10.
ಮಾತು ಬೆಳ್ಳಿಯು
ಮೈಕಿನೆದುರು ನಿಂತು
ಬಂಗಾರವಾಯ್ತು!
@ಪ್ರೇಮ್@
20.05.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ