ಭಾನುವಾರ, ಜೂನ್ 16, 2024

ಬಾಳು

ಬಾಳು

ಬೇಡ ಎನುವರು ಜನ ಶಾಶ್ವತ ವಿಶ್ರಾಂತಿ
ಬೇಕು ಜಗದಲಿ ತಮಗೆ ರಜೆಯ ಶಾಂತಿ
ಬೇಡ ಎಂದಿಗೂ ಜಗದಿ ಓಂ ಶಾಂತಿ
ಬರಬೇಕು ಮತ್ತೆ ಮತ್ತೆ ಸುಖದ ಕೀರ್ತಿ

ಬೇಕು ನಿತ್ಯ ಸದಾಚಾರದ ಜ್ಯೋತಿ
ಬೇಡ ಎಂದಿಗೂ ನೆಮ್ಮದಿಯ ಸದ್ಗತಿ
ಐಕ್ಯತೆಯ ಮಂತ್ರ ಬೇಡ ನ್ಯಾಯ ನೀತಿ


ಮೂಕ ಪ್ರೇಕ್ಷಕ ಆದರೂ ಬೇಕು ಸ್ಪೂರ್ತಿ

ಕವಿಯಾಗಲಿ ಕಲಿಯಾಗಲಿ ಇರಲಿ ಶಕ್ತಿ
ಆದರೂ ಆಗದ ಕಾರ್ಯಕ್ಕೆ ಬೇಕು ಯುಕ್ತಿ
ಇರಲಿ ಹೃದಯದಲಿ ದೇವರಲಿ ಭಯ ಭಕ್ತಿ
ಕೊನೆಗೊಂದು ದಿನ ಸಿಗಲಿಹುದು ಮುಕ್ತಿ
@ಹನಿಬಿಂದು@
16.06.2024



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ