ಬಾಳು
ಬೇಡ ಎನುವರು ಜನ ಶಾಶ್ವತ ವಿಶ್ರಾಂತಿ
ಬೇಕು ಜಗದಲಿ ತಮಗೆ ರಜೆಯ ಶಾಂತಿ
ಬೇಡ ಎಂದಿಗೂ ಜಗದಿ ಓಂ ಶಾಂತಿ
ಬರಬೇಕು ಮತ್ತೆ ಮತ್ತೆ ಸುಖದ ಕೀರ್ತಿ
ಬೇಕು ನಿತ್ಯ ಸದಾಚಾರದ ಜ್ಯೋತಿ
ಬೇಡ ಎಂದಿಗೂ ನೆಮ್ಮದಿಯ ಸದ್ಗತಿ
ಐಕ್ಯತೆಯ ಮಂತ್ರ ಬೇಡ ನ್ಯಾಯ ನೀತಿ
ಮೂಕ ಪ್ರೇಕ್ಷಕ ಆದರೂ ಬೇಕು ಸ್ಪೂರ್ತಿ
ಕವಿಯಾಗಲಿ ಕಲಿಯಾಗಲಿ ಇರಲಿ ಶಕ್ತಿ
ಆದರೂ ಆಗದ ಕಾರ್ಯಕ್ಕೆ ಬೇಕು ಯುಕ್ತಿ
ಇರಲಿ ಹೃದಯದಲಿ ದೇವರಲಿ ಭಯ ಭಕ್ತಿ
ಕೊನೆಗೊಂದು ದಿನ ಸಿಗಲಿಹುದು ಮುಕ್ತಿ
@ಹನಿಬಿಂದು@
16.06.2024
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ