ಮನದ ಭಾವವೆಲ್ಲ ಇಂದು
ಬತ್ತಿ ಹೋದ ಹಾಗಿದೆ
ಹಕ್ಕಿ ಹಾರಿ ಹೋಗಿ ತಾನು
ಮರದ ಮೇಲೆ ಕುಳಿತಿದೆ
ಹಿಗ್ಗಿನಿಂದ ಬೇರೆ ಮರಿಗೆ
ಗುಟುಕು ನೀಡಿ ಸಲಹಿದೆ
ಬೇಡ ಬೇಡವೆಂದು ತನ್ನ
ಬಳಿಯೆ ಕರೆದುಕೊಂಡಿದೆ
ಕಣ್ಣೀರೆಲ್ಲ ಹೆಪ್ಪುಗಟ್ಟಿ
ಮಂಜುಗಡ್ಡೆಯಾಗಿದೆ
ನೋವ ಕಡಲು ಉಕ್ಕಿ ಹರಿದು
ಸಾವು ಸನಿಹ ಕರೆದಿದೆ
ಬೇನೆ ಬೇಸರೆಲ್ಲ ಸೇರಿ
ಯಾಕೋ ನಗೆಯು ಮಾಸಿದೆ
ಆದರೇನು ತನಗೆ ತಾನೇ
ಸರಿಯ ಪಡಿಸದಾಗಿದೆ
ಬೇರೆ ಬೇರೆ ಮನವು ನಿತ್ಯ
ಆಲೋಚನೆ ಬೇರೆ ಸತ್ಯ
ನಂಬಿಕೆಯೂ ಆಯ್ತು ಮಿಥ್ಯ
ಭರವಸೆಗೆ ಇಲ್ಲ ಸತ್ವ
@ಹನಿಬಿಂದು@
28.06.2024
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ