ಗುರುವಾರ, ಜೂನ್ 27, 2024

ಸತ್ಯಕ್ಕೆ ಸತ್ವವಿಲ್ಲ

ಸತ್ಯಕ್ಕೆ ಸತ್ವವಿಲ್ಲ 

ಮನದ ಭಾವವೆಲ್ಲ ಇಂದು
ಬತ್ತಿ ಹೋದ ಹಾಗಿದೆ
ಹಕ್ಕಿ ಹಾರಿ ಹೋಗಿ ತಾನು
ಮರದ ಮೇಲೆ ಕುಳಿತಿದೆ

ಹಿಗ್ಗಿನಿಂದ ಬೇರೆ ಮರಿಗೆ
ಗುಟುಕು ನೀಡಿ ಸಲಹಿದೆ
ಬೇಡ ಬೇಡವೆಂದು ತನ್ನ
ಬಳಿಯೆ ಕರೆದುಕೊಂಡಿದೆ

ಕಣ್ಣೀರೆಲ್ಲ ಹೆಪ್ಪುಗಟ್ಟಿ
ಮಂಜುಗಡ್ಡೆಯಾಗಿದೆ
ನೋವ ಕಡಲು ಉಕ್ಕಿ ಹರಿದು
ಸಾವು ಸನಿಹ ಕರೆದಿದೆ

ಬೇನೆ ಬೇಸರೆಲ್ಲ ಸೇರಿ
ಯಾಕೋ ನಗೆಯು ಮಾಸಿದೆ
ಆದರೇನು ತನಗೆ ತಾನೇ
ಸರಿಯ ಪಡಿಸದಾಗಿದೆ

ಬೇರೆ ಬೇರೆ ಮನವು ನಿತ್ಯ
ಆಲೋಚನೆ ಬೇರೆ ಸತ್ಯ
ನಂಬಿಕೆಯೂ ಆಯ್ತು ಮಿಥ್ಯ
ಭರವಸೆಗೆ ಇಲ್ಲ ಸತ್ವ

@ಹನಿಬಿಂದು@
28.06.2024


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ