ಬೇಕು
ಸಾಂತ್ವನ ಹೇಳಲು ನನ್ನಲಿ ಎಲ್ಲಿದೆ ಪದ ಸಂಪತ್ತು
ಓ ಭಾನುವೇ?
ಸ್ವಂತದ್ದು ಎಂದಿರುವುದು ನೀನಲ್ಲದೆ ಇನ್ಯಾರ ಕಿರಣ
ಬಲ ಓ ರವಿಯೇ!
ಮಂಥನ ಮಾಡಿ ನೋಡಲು ನಾ ಬೇರೆ ನೀ ಬೇರೆಯೇ
ಬಾಳ ಭಾಸ್ಕರನೇ!
ಬುದ್ಧಿ ಹೇಳಿ ಕೈ ಹಿಡಿದು ಮುನ್ನಡೆಸ ಬೇಕಾದವ ನೀನಲ್ಲವೇ
ಧರೆ ಬೆಳಗೊ ಆದಿತ್ಯನೇ !
ಪ್ರಶಾಂತತೆ , ತಾಳ್ಮೆ , ಕಾಯುವಿಕೆ ಬೇಕಲ್ಲವೇ ಜಗದಿ?
ನಿನಗಾಗಿ ನನ್ನ ಇರುಳೆಲ್ಲ ಪರಿತಪಿಸುವೆನಲ್ಲ ನಿತ್ಯದಿ?
ನೀ ನಾಳೆ ನನ್ನೆಡೆ ಬಂದು ಬೆಳಕೀವೆ ಎಂಬ ನಂಬಿಕೆ
ಭರವಸೆಯೊಂದೇ ಬಾಳಿಗೆ, ಈ ಇಳೆಗೆ ಹೊಂದಿಕೆ
ಮತ್ತೇಕೆ ಕೋಪ, ಈ ಪರಿತಾಪ ನೋವು, ಕಷ್ಟ, ಸಂಕಟ
ಭೂಮಿಗಾಗಿ ಭಾನು, ನಿನ್ನ ಕಿರಣದ ಬೆಳಕಿಂದ ಪ್ರೇಮ
ಅಕಟಕಟಾ ನೋವ ಜಾಡಲಿ ಅದೇಕೆ ಆತಂಕ, ಅಪಹಾಸ್ಯ
ಕೆಲಸಗಳಿನ್ನೂ ಬಾಕಿಯಿವೆ, ಹಸಿರ ಹೆಚ್ಚಿಸಬೇಕಿದೆ ಜಗದಿ!
ಬಾಳಿನುದ್ದಕ್ಕೂ ಗುರುತರ ಗುರಿಗಳಿವೆ ಸಾವಿರಾರು,
ತಲುಪುವ ತನಕ ಕಾಯಬೇಕಿದೆ ಕ್ಷಣ ನೂರಾರು!
ಒಂದಿಷ್ಟು ನೋವು ನಲಿವು, ಕಷ್ಟ ಸುಖಗಳ ತಿರುವು,
ಬರಲಿಹುದು ಮುಂದೆ ಹಸಿರು ಕಾನನದ ನಗುಬೆಂಬ ಅರಿವು!
ಪ್ರಾಣಿ ಪಕ್ಷಿ ಕೀಟ ನಲಿದು ನಾಟ್ಯವಾಡಲಿ ಧರೆಯಲಿ
ಬೆಳಕು, ಪ್ರಕಾಶ, ನೆರಳು, ತಣ್ಣನೆ ಗಾಳಿ ಕೊಡುತಲಿ
ಧರಣಿ ಕಾದಿಹಳು ಹಚ್ಚ ಹಸಿರಿನ ಸಿರಿ ಸೌಖ್ಯಕಾಗಿ
ಮತ್ತೇಕೆ ಗಾಬರಿ, ಕಾತರ ನೀ ಬರುವ ಕ್ಷಣಕಾಗಿ
ಭೂಮಿ ಭಾನು ಬೆರೆತು ಒಂದಾದಾಗಲೇ ಸ್ವರ್ಗ ಸುಖ
ಮಾನವ ಪ್ರಾಣಿ ಪಕ್ಷಿ ಕೀಟ ಸಂಕುಲಕೆ ನಗುಮುಖ
ನಾ ನಿನ್ನನೇನೆನಲಿ ನೀ ನನ್ನನೇನೆನುವೆ ಜಗದಲಿ
ಧರೆ ನಗಲು ರವಿ ಕಿರಣದ ಪ್ರಸಾದ ಬೇಕಲ್ಲವೇ ಧರೆಯಲಿ
@ಹನಿಬಿಂದು@
17.06.2024
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ