ಬೇಕು
ಏಕೆ ಯೋಚನೆ ನಿತ್ಯ ಬವಣೆ
ಬೇಕು ಒಳ್ಳೆಯ ಚಿಂತನೆ
ಶೋಕಿ ಬಾಳಿಗೆ ಅಂಟಿ ನಿಂದನೆ
ಸಾಕು ಸಣ್ಣ ಆಲೋಚನೆ...
ನೋವು ನಲಿವು ಕಷ್ಟ ಸುಖವು
ಒಂದೇ ನಾಣ್ಯದ ಮುಖವದು
ಕಾವು ಕೊಡುವ ಹಕ್ಕಿಯಂದದಿ
ನಂದೇ ಎಂಬ ನಯವದು
ಕೊನೆಗೆ ಮೊದಲಿಗೆ ತಾಳವಿರದೇ
ನಿತ್ಯ ನೂತನ ಬಾಳಿಗೆ
ಎಣೆಗೆ ಸಿಗದ ಬಿರುಕು ಇರದೇ
ಸತ್ಯ ಬದುಕಿನ ಕಿಂಡಿಗೆ
@ಹನಿಬಿಂದು@
06.06.2024
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ