ಅಮೃತ ಸಂಗಮ
ಸ್ನೇಹದ ಮಿಲನವು ಸ್ನೇಹ ಸಂಗಮವು
ಕವಿ ಹೃದಯಗಳ ಗೆಲ್ಲುವ ಛಲವು
ಅರಿತ ಮನಗಳ ಜೋಡಿಸೊ ಸೇತುವೆ
ಕೊಂಡಿಯು ಭದ್ರವು ತನ್ಮಯರಾಗೆ
ತಂಡದ ಮುಖಂಡ ಬಾನಿನ ಚಂದಿರ
ಗಂಧರ್ವ ಶ್ಯಾಮ ಪುಟ್ಟ ರತ್ನರು
ವಿಜಯದ ಮೆಟ್ಟಿಲಿಗೆ ಕಾರ್ಯಕ್ರಮ
ಯಾರಿಗೂ ಬೇಡ ಪದನಾಮ..
ತಂಬೆಲರ ತುದಿಯಲಿ ತಂಪನೆಯ ತಂಗಾಳಿ
ಚಂದಿರನ ಅಡಿಯಲಿ ತಣ್ಣನೆಯ ಪದತಳಿ
ತೋರಣವು ಕನ್ನಡಕೆ ಕೃತಿ ಸಮರ್ಪಣೆಯಲಿ
ಮರಳಿ ಬರುವಂತಿದೆ ಅಂಗಳಕೆ ಖುಷಿಯಲಿ..
ತಡಬಡಿಸೆ ಬರವಣಿಗೆ ತೃಪ್ತಿಯಾಗದು ಇಲ್ಲಿ
ವಿಮರ್ಶೆಯೇ ಕೈಗನ್ನಡಿ ತಿದ್ದಿಕೋ ಅಲ್ಲಲ್ಲಿ..
ತರುಲತೆಯ ತವರಂತೆ ಸಂಗಮದ ಸಮರ್ಪಣೆ
ಗುಂಪಿಗಿದೋ ಈ ಸಣ್ಣ ಗೀತೆ ಅರ್ಪಣೆ..
@ಪ್ರೇಮ್@
18.11.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ