ಮಂಗಳವಾರ, ಜನವರಿ 21, 2020

1325.ಭಾವಗೀತೆ-ಮುರಳಿನಾದ

ಭಾವಗೀತೆ

ಮುರಳಿನಾದ

ಸನಿಹ ಬಾರೋ ಕೃಷ್ಣ ನಿನ್ನ
ಕೊಳಲ ಗಾನ ಕೇಳುವೆ.
ನಾದದಿಂದ ಮನದ ತುಮುಲ
ದೂರ ಮಾಡಿಕೊಳ್ಳುವೆ..
ಸಂಗೀತದ ಸ್ವರ ಮಾಧುರ್ಯ
ಉಸಿರಲಿ ಲೀನವಾಗ ಬೇಕಿದೆ..

ನಾನು ನೀನು ಒಂದೇ ಎಂದು
ಜಗಕೆ ಸಾರಿ ಹೇಳಬೇಕಿದೆ..
ಮೋಸ ಮಾಡದಿರನು ಹರನು
ಎನುವ ಭಾವ ಹರಿಸಬೇಕಿದೆ..

ಮುಕುಂದ ನಿನ್ನ ಗಾನ ಕೇಳಿ
ಮೈಯ ಮರೆಯ ಬೇಕಿದೆ
ಗಾನದಲ್ಲಿ ಬೆರೆತು ಲೀನವಾಗಿ 
ಮನ ತೇಲಾಡು ಎಂದಿದೆ..

ಮುರಳಿ ನಿನ್ನ ಕೊಳಲ ಹಿಡಿದ
ಕರವ ಹಿಡಿಯೆ ಕಾದಿಹೆ..
ಮರದ ನೆರಳ ಬಳಿಯೆ ನಿಂತು
ನಿನ್ನ ಬರವಿಗಾಗಿ ಕಾಯುವೆ..
@ಪ್ರೇಮ್@
31.12.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ