ಗುರುವಾರ, ಜನವರಿ 2, 2020

1308. ಧರೆಗೆ

ಧರೆಗೆ..


ತಾಯೇ ಏಕೆ ಮುಚ್ಕೊಂಡಿರುವೆ
ಮಂಜಲ್ ನಿನ್ನ ಮೈನಾ..
ಜನ್ರು ನಿನ್ಗೆ ಬಿಡ್ತಾ ಇಲ್ವಾ
ಕೊಟ್ರಾ ಎಲ್ಲಾ ಕೈನಾ...

ಹೊದ್ಕೊಂಡಂಗೆ ಕುಂತ್ಕಂಡ್ ನೀನು
ಯಾರ್ನ ನೋಡ್ತಿದ್ದೀಯ?
ಚಳಿಯೋ ನನ್ಗೆ ತಡಿಯಕ್ಕಾಯ್ತಿಲ್ಲ
ಯಾಕ್ ಹಿಂಗ್ ಮಾಡ್ತಿದ್ದೀಯ?

ರವಿಯು ಬರೋಕೆ ಕಾಯ್ತವ್ನಲ್ಲ
ಬರ್ಲಿ ಕಿರಣದ್ ಬೆಳಕು.
ಕವಿಯು ಕುಂತು ಬರಿತವ್ನಲ್ಲ
ಹೋಗ್ಲಿ ಮನದ ಮುಸುಕು..

ಬೇಡದ್ದೆಲ್ಲ ಮೇಲ್ ಮೇಲೆ
ಬಿಸಾಕ್ಬೇಡ್ರಂತ ತೋರ್ಸು!
ನಿನ್ನಯ ಕಷ್ಟವ ಅರಿಯದ ಜನಕೆ
ಹಿಡ್ಕೊಂಡ್ ನಾಲ್ಕು ಬಾರ್ಸು..
@ಪ್ರೇಮ್@
22.11.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ