ಭಕ್ತಿಗೀತೆ
ನಮಿಸುವೆನು
ನಮಿಸುವೆನು ನಮಿಸುವೆನು
ನವನೀತದೊಡೆಯನಿಗೆ
ನಯವಂಚನೆಯ ನರನಿಂದ
ನೂರಂಗುಲ ಎಸೆವವಗೆ
ನಮಿಸುವೆನು ನಮಿಸುವೆನು
ನಿತ್ಯ ಪೂಜೆಯ ಪಡೆವ
ನರಕೋಟಿ ನಾರಾಯಣನಿಗೆ
ನೀಡಿಹನು ವರಗಳನು
ತನ್ನಯಾ ಭಕುತರಿಗೆ
ನಮಿಸುವೆನು ನಮಿಸುವೆನು
ನೋವನ್ನು ಕಳೆಯುವವ
ನಾರದನ ನೆನೆವವನ
ನಿಜವನ್ನೇ ಅರುಹುವವ
ನೂರ್ಕೋಟಿ ಜನತೆಯೇ
ನೆನೆವಂತ ನಿಜ ವದನ..
ನಮಿಸುವೆನು ನಮಿಸುವೆನು
ನೇರವಾಗಿ ಬರುತಲಿಹ
ನೈಜತೆ ನಿಜ ಮೂರುತಿಗೆ
ಕೃಷ್ಣ ಮಾಧವನೆಂಬ
ನಯನ ಮನೋಹರನಿಗೆ....
@ಪ್ರೇಮ್@
17.04.2021
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ