ನೀನೇ ನೀನು
ವಿರಹದುರಿಯ ಕಂಡೆ ನಾನು
ನಿನ್ನ ಪಾದಧೂಳ ಮರೆತು
ಭಕ್ತಿ ಪಾತ್ರೆಯನ್ನು ತೊರೆದು
ಶಕ್ತಿ ಗಳಿಸೋ ತಂತ್ರ ಹೂಡಿ...
ಪರಮ ನೀನು ಈಗ ತಿಳಿದೆ
ವರವ ನೀಡೋ ಎನುತ ಬೇಡಿದೆ
ಮರವ ಬೆಳೆಸೋ ಕಾಯಕ ಹಿಡಿದೆ
ಕರವ ಪಿಡಿಯೋ ಸತ್ಯ ನುಡಿದೆ...
ಬೇಸರವನು ಭಯದಿ ಓಡಿಸಲಾರೆ
ನೇಸರ ರೂಪನೆ ಮರೆತು ನಾ ಇರಲಾರೆ
ಕಾಸನು ಮಾಡುತ ನಿನ್ನಯ ಮರೆತೆ
ಮೋಸದ ವ್ಯಾಪಾರದಿ ವಿರಹದಿ ಬೆಂದೆ..
ಸತ್ಯ ನೀನು ನಿತ್ಯ ನೀನು
ಶಾಂತಿ ನೀನು ಭಕ್ತಿ ನೀನು
ಭಾವ ನೀನು ಉಸಿರು ನೀನು
ಭೋಗ ನೀನು ಭಾಗ್ಯ ನೀನು..
@ಪ್ರೇಮ್@
22.04.2021
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ