ಶನಿವಾರ, ಏಪ್ರಿಲ್ 17, 2021

ಕುಸುಮ ಷಟ್ಪದಿ

ಕುಸುಮ
ಕುಸುಮವನು ಬರೆಯುತಿಹೆ
ಪಸರಿಸುತ ನಾಡಿನಲಿ
ಕೆಸುವಿನಲಿ ಜಾರುತಿಹ ಮಳೆನೀರ ತೆರ...
ಹಸನಾದ ಹನಿಯಂತೆ
ಕೊಸರಾಟ ಮರೆತಂತೆ
ಬಸವನಾ ತಿರುಗಾಟ ದಿನದಂತೆಯೆ

ಬಿಸಿಲಲ್ಲಿ ಹೊರಟಂತೆ
ಕಸಿವಿಸಿಯು ಬರದಂತೆ
ಉಸಿರಾಟ ತಾನಾಗೆ ಹೊರಟಂತೆಯೆ.
ಪದಗಳನು ಹುಡುಕುತ್ತ
ಬದಲಾಗಿ ಹೆದರುತ್ತ
ಸದ್ದಿರದೆ ಗಾಲಿಯಲಿ ತೇಳುತಲಿಯೆ.
@ಪ್ರೇಮ್@
17.04.2021

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ