ಮಂಗಳವಾರ, ಆಗಸ್ಟ್ 21, 2018

426.ಭಾವಗೀತೆ-9

ನುಡಿನಮನ

ಎತ್ತಲೆತ್ತಲೆತ್ತ ಸಾಗಿ ತಿರುಗಿ
ಬಂತು ಮಧುರವಾದ ಮಾತು
ಜೀವವೆಲ್ಲ ಕಲೆತು ಸೇರಿ
ಮನವನೆಲ್ಲ ತಾನೆ ಬೆಳೆಸಿ

ಮಾನವನೆ ಮಾತಿನೊಡೆಯ
ಎಂದಿತು ಮನ ಜಗ ಮರೆತು
ತಮ್ಮ  ಬಳಿಯ ಮನೆಯ ಜನರ
ಒಮ್ಮೆ ತಿರುಗಿ ನೋಡಲೊಳಿತು..

ಮಾತಿಗೇನು ವರಮಾನವೆ,
ಹಣ ವಸ್ತು ಒಡವೆಯೆ?
ಮಾತಿನಿಂದ ಜಗಳ ಕದನ
ಪೆಟ್ಟು ರಟ್ಟು  ಗಲಾಟೆಯೇ!!

ಇರಲಿ ಮಧುರ ಮಾತು ಅಮರ
ನುಡಿ ನಮನ ನೊಂದವರಿಗೆ
ವಿವೇಕರಂತೆ ಬಾಳಿ ಬದುಕಿ
ಸಂತಸ ಕೊಡಿ ಬಾಳಿನುದ್ದಕೆ..

ನಾನೆ ಎನ್ನಲೇನು ಇಲ್ಲ
ಜಗದ ತುಂಬ ನೀರಿದೆ..
ತಾನೆ ಬದುಕಿ ಬಾಳಬೇಕು
ಸಹಾಯಮಾಡಿ ಪರರಿಗೆ

ಸರ್ವಜನರ ಹಿತವಿರಲಿ
ನಮ್ಮ ಒಂದು ಮಾತಿಗೆ
ಶಿವನೂ ಮೆಚ್ಚಿ ಹರಸುವನು
ಮುತ್ತಿನಂಥ ಮಾತಿಗೆ.

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ