ನಾನೇ ಕಾರಣ
ದುಡಿದಿದ್ದ ಇಡಲಿಲ್ಲ ಕೂಡಿ
ಆಗಿನ್ನೂ ಯೌವನದಲ್ಲಿದ್ದೆ ನೋಡಿ
ಸಾಕಿದೆನು ಮಕ್ಕಳ ಬೇಡಿ
ಕಸಿದುಕೊಂಡರೆಲ್ಲ ನನ್ನ ಕಾಡಿ..
ಈಗೆನಗೆ ಮುದಿ ವಯಸ್ಸು
ಮಕ್ಕಳಿಗೂ ಕಳೆಯಿತು ಹದಿವಯಸ್ಸು!
ಶಕ್ತಿಯಿಲ್ಲ ಕೈಕಾಲ ನರಗಳಲಿ
ಮಕ್ಕಳ ಸಮಯವೆಲ್ಲ ಮೊಬೈಲಲಿ..
ಸಾಕುವರೆಂಬ ಭರವಸೆ ನಮಗಿಲ್ಲ
ಯಾರು ಯಾರನ್ನೂ ಕಾಯುವ ಹಾಗಿಲ್ಲ
ಬಲವಿದ್ದಷ್ಟು ದಿನ ಬದುಕುವ ಛಲ
ರಟ್ಟೆಯೊಳಗಿಲ್ಲ ಕಸುವು ಅಗೆಯಲು ನೆಲ!
ಬದುಕ ಬವಣೆ ಸಾಕಾಗಿ ಹೋಯಿತು
ಮನ ದೇವನ ಸೇರಲು ಕಾತರಿಸಿತು
ಮಕ್ಕಳಿಗೆ ಹಿರಿಯರ ನುಡಿ ಬೇಡವಾಯಿತು
ನನ್ನ ಬಾಳು ಹೀಗೇ ಮತ್ತೆ ಒಂಟಿಯಾಯಿತು..
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ