ಹೊರಡಲುಂಟು...
ಬಳಸು ಆರೋಗ್ಯಕೆಲ್ಲ ಮಾತ್ರೆ ಮದ್ದಿನಂತೆ ಊಟ
ಆಗ ಇರದು ನಿನಗಾವುದೇ ರೋಗಗಳ ಕಾಟ!
ಸಿಕ್ಕಿದ್ದೆಲ್ಲ ತಿಂದು ಹೊಟ್ಟೆ ಕೆಡಿಸಿಕೊಳ್ಳೊ ಬದಲು
ಅಲ್ಪ ತಿಂದು ನಿರೋಗಿಯಾಗಿ ಬದುಕುವುದೇ ಮೇಲು..
ನಾನು ನೀನು ನನ್ನ ನಿನ್ನ ಎಂಬುದೇನು ಇಲ್ಲ,
ಸರ್ವವನ್ನು ಕಾಯಲಿಕ್ಕೆ ಮೇಲೊಬ್ಬನಿರುವನಲ್ಲ!
ಏನೆ ತಿಂದು ಏನೆ ಕೊಟ್ಟು ಬೆಳೆದರೇನು ಫಲ
ಒಂದು ದಿನ ಬಿಟ್ಟು ಹೋಗಬೇಕು ನೆಲ!
ಆಸ್ತಿ -ಪಾಸ್ತಿ ಮೇಲು- ಕೀಳು ಪ್ರತಿಯೊಂದೂ ತೊರೆದು
ಸಾಗಬೇಕು ಜನರ ನಡುವೆ ಚಟ್ಟವನ್ನು ಹಿಡಿದು..
ಯಾತ್ರೆಯಿಹುದು ಭೂಮಿಯಿಂದ
ಕೈಲಾಸದ ಕಡೆಗೆ
ಸಾಗಲಿಹುದು ಬಂದಲ್ಲಿಂದ ದೇವನ ಕಾಲ ಕೆಳಗೆ..
ದಾನ-ಧರ್ಮ ನಮ್ಮ ಕಾಯ್ವ ಐಶ್ವರ್ಯದ ವಿಧಿಯು
ಮಾನ-ಪ್ರಾಣ ಬೇಕಾಗಿಹ ಧನ ಸಂಪತ್ತು ನಿಧಿಯು..
ಬ್ರಹ್ಮ ಬರೆದ ಹಾಗೆ ಬದುಕೊ
ನಟರಲ್ಲವೆ ನಾವು?
ಬರಲಾರೆದೆ ಪ್ರತಿ ಹೃದಯಕೂ ಒಂದು ದಿನ ಸಾವು ..
ಮೇಲೇನಿದೆ, ಕೆಳಗೇನಿದೆ ನೋಡಿದವ ಯಾರು?
ನಿನ್ನಂತೆಯೆ ನಾನಲ್ಲವೆ, ಯಾಕೆಮಗೆ ಬೇಜಾರು?
ಮತ್ಸರವು ನಮಗೇತಕೆ ನಮ್ಮಯ ದಿನ ನಾಲ್ಕು..
ಹಾರಾಡುತ ಬಾಳನ್ನು ಕಳೆದುದು ಅದು ಸಾಕು...
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ