ಧರಣಿಗೆ ಶರಣು
ಹಸಿರ ಸೀರೆಯುಟ್ಟು, ಕೇಸರಿ ಹಣೆಯ ಬೊಟ್ಟು
ನಾದ ನಿನಾದ ಸೊಂಪಿಗೆ ಪಕ್ಷಿ ಕಲರವ ಗಾನ
ನೆಮ್ಮದಿ ಬೇಕೆನಲು ಕಾನನದ ಗಾಢ ಮೌನ//
ಹರಿವ ತೊರೆ,ಧುಮ್ಮಿಕ್ಕುವ ಜಲಪಾತದ ತಳುಕು
ಕೊರೆವ ಚಳಿ,ಯತುಗಳ ಚಿಗುರುವ ಝಳಕು.
ಕುಸುಮ, ಗಿರಿಶಿಖರಗಳಂದ ನೋಟವೆನ್ನ ಸಾಲದು
ಅಂದವ ವರ್ಣಿಸಲು ನನ್ನ ಜೀವನವೇ ಕಿರಿದು//
ಚೆಲುವೆ ಧರಣಿಯ ಸರ ಪಕ್ಷಿಗಳ ಸಾಲು
ಬರುವ ರವಿಯು ನಿನ್ನ ನೋಡೆ ದಿನಾಲು
ಮರ,ಬಂಡೆ,ಕಡಲ ಜಲ ರಾಶಿ ನಿಸರ್ಗಕೆ ಕಾವಲು
ಸರ್ವರ ರಕ್ಷಣೆಗಿಹುದು ಹಿಮಾಲಯದ ಸಾಲು..//
ರಂಗಿನಾಟ ಪಶು-ಪಕ್ಷಿ-ಪ್ರಾಣಿ ಕೀಟ ಸಂಪತ್ತಿಗೆ
ಮೋಜಿನಾಟ ಮಾನವ ಜನಕೋಟಿ ಕುಲಕೆ
ಧರಣಿ ಮಾತೆಯೆ ನಿನ್ನೊಲವಿಗೆ, ಗೆಲುವಿಗೆ ಶರಣು
ಸಾಲವು ನೋಡಿ, ಸವಿಯಲು ನನ್ನೆರಡು ಕಣ್ಣು...//
ದಿಗಂತದೆಡೆಗೆ ಬಾಗಿಹುದು ನಿನ್ನ ಕಮಾನು
ಆಕಾಶಕಿಡಬಲ್ಲನೇ ಏಣಿಯ ಬುದ್ಧಿಜೀವಿ ಮನುಜನು?
ನಿನಗೆ ನೀನೇ ಸಾಟಿ ಇಳೆ ದೇವಿ ತಾಯೇ!
ಗ್ರಹಿಸಲಾರೆನು ಮನದಿ ಅವನಿ ನಿನ್ನ ಮಾಯೆ!!//
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ