ಏನೇನೋ
ದೇವನ ಲೀಲೆ ಬದುಕಿನ ಹಾದಿ
ಒಂದೂ ಅರಿಯೆನು ನಾನಿಲ್ಲಿ
ಪ್ರೀತಿ ಕಾಳಜಿ ಸ್ನೇಹ ದ್ವೇಷವೂ
ಎಲ್ಲವೂ ಬರುವುದು ಒಬ್ಬರಲಿ
ನ್ಯಾಯ ನೀತಿ ಸಮಾನತೆಗಾಗಿ
ಹೋರಾಟ ತಾನೇ ಬದುಕಿನಲಿ
ಕಾಯ ಮರೆತರೂ ಉದರವು ಬಿಡದು
ಸ್ವಾತಂತ್ರ್ಯ ಬೇಕು ಬಾಳಿನಲಿ
ಮೋಸ ಅನ್ಯಾಯ ನಡೆಯದು ಇಲ್ಲಿ
ಕೇಳೋ ಮೂರ್ಖ ಭೂಮಿಯಲಿ
ಇಂದು ರಾಜನು ನಾಳೆ ಸಭಿಕನು
ಅರಿಯೋ ದೇವನ ಸೃಷ್ಟಿಯಲಿ
ಕಡಲಿನ ಆಳದ ಮುತ್ತನು ಹಿಡಿಯಲು
ಬಾಳಿನ ವೇಗವು ಗುರಿಯಾಗಿ
ಹನಿ ಸೇರಿದರೆ ಹಳ್ಳವು ಎಂಬುದು
ಸರ್ವ ಹೃದಯಕೂ ಜೊತೆಯಾಗಿ
@ಹನಿಬಿಂದು@
29.05.2024
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ