ಭಾನುವಾರ, ಅಕ್ಟೋಬರ್ 13, 2024

ಟಾಟಾ

ಟಾಟಾ ಹೇಳಿದ ಟಾಟಾ 

ಬೇಕಾದ್ದೆಲ್ಲ ಭಾರತೀಯರಿಗೆ ಕೊಟ್ಟು
ಬಡವರ ಉದ್ಧಾರಕ್ಕೆ ಮನಸಿಟ್ಟು 
ದಾನದ ಮಹತ್ವ ತಿಳಿಸಿ ಕೊಟ್ಟು
ದುಡಿಮೆಯ ಮಹತ್ವ ಕಲಿಸಿಕೊಟ್ಟು

ಟಾಟಾ ಸರ್ವರ ಹಿತೈಷಿಯಾಗಿ 
ಭಾರತೀಯರ ಬೆಂಬಲಿಸಿ ಬಾಗಿ
ದುಡಿತದ ಹಣದ ದಾನಿಯಾಗಿ
ಭಾರತೀಯರ ರಾಯಭಾರಿಯಾಗಿ

ಒಂಟಿತನದಲಿ ಸಾಧನೆ ಮಾಡಿ
ಜಂಟಿ ಶಕ್ತಿಯಲಿ ಕಾರ್ಯವ ನೀಡಿ
ಮನದ ಒಳಗೆ ಧೈರ್ಯವ ದೂಡಿ
ನಿಜವಾದ ಪ್ರೀತಿಯ ಆಳವ ನೋಡಿ

ಭಾರತ ದೇಶಕೆ ನೀನೇ ವೀರ
ವ್ಯಾಪಾರ ಗೆದ್ದ ಸರದಾರ
ವಿವೇಕರ ಮಾತಿಗೆ ಹಾಕಿದೆ ದ್ವಾರ
ಭಾರತ ಮುನ್ನಡೆಸಿದ ಶೂರ
@ಹನಿಬಿಂದು@
14.10.2024

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ