ಮಂಗಳವಾರ, ಸೆಪ್ಟೆಂಬರ್ 25, 2018

490. ನಂಬಿಕೆ

ಇಹುದು ನಂಬಿಕೆ

ಗಾಳಿ ಕದಡಿಡೆ ನೀರು ಮುಗಿದಿದೆ
ಮಣ್ಣು ವಿಷಮಯ ಧರೆಯು ಹಾಳಾಗಿದೆ
ಎಂದೆಂಬರು ಜನ ತಾವೆ ಕೆಡಿಸಿ ಧರಿತ್ರಿಯ
ನಮಗೇನೋ ಭರವಸೆ ಇಳೆ ನಿನ್ನ ಮೇಲೆ..

ತಾರೆಗಳೂ ಸಾಯುವುವಂತೆ
ಸಾವಿರಾರು ವರುಷದ ಬಳಿಕ
ಸ್ಫೋಟಗೊಂಡು ಕುಬ್ಜವಾಗಿ
ನಮಗೇನೋ ನಂಬಿಕೆ ರವಿ ನಿನ್ನ ಮೇಲೆ....

ಮರಗಳೆಲ್ಲ ಉರುಳಿದ ಬಳಿಕ
ಭೂತಾಯಿ ಬಿಸಿಯೇರುವಳಂತೆ
ಧ್ರುವದ ಹಿಮ ಕರಗುವುದಂತೆ
ನಮಗೆಲ್ಲಾ ನಂಬಿಕೆ ಕಾವ ಹಿಮಾಲಯದ ಮೇಲೆ..

ಸಾಗರವು ಉಕ್ಕುವುದಂತೆ
ವಿಷವಾದ ಜಲ ಕೊಲ್ಲುವುದಂತೆ
ಜಲಪ್ರಳಯ ಬರುವುದಂತೆ
ಆದರೂ ಸಾಗರ,ಕೊಲ್ಲಿ ಸಮುದ್ರಗಳೆ
ಆಸರೆ ಸದಾ ನೀವು ನಮಗೆ
ಉಕ್ಕಿ ಹರಿಯದಿರಿ ಭಾರತಿಯೆಡೆಗೆ
ಉಳಿಸೆಮ್ಮ ನಂಬಿಕೆಯ ನಿಮ್ಮೆಡೆಗೆ
ಭಯದಿ ಭವದಿ ಬದುಕುವ ಬಾಳಿಗೆ.

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ