ಶುಕ್ರವಾರ, ಏಪ್ರಿಲ್ 26, 2019

ವಿಮರ್ಶೆಗಳು

[4/26, 12:19 PM] Wr S K Hiremat: @ಪ್ರೇಮ್@  ಅವರ. *ಸತ್ಯಸಂಧತೆ*
ಒಂದು ಚಂದದ ಕವನ

ಸತ್ಯದ ಮಹತ್ವವನ್ನು ಈ ಕವನದಲ್ಲಿ ಬಹಳ ಸೊಗಸಾಗಿ ವ್ಯಕ್ತಪಡಿಸಲಾಗಿದೆ. ಸುಳ್ಳನ್ನು ಊರ ಬಾಗಿಲಿನಿಂದಾಚೆ ಕೊನೆಗೊಳಿಸ ಬೇಕೆಂಬುದು ಕವಿಯ ಆಶಯವಾಗಿದೆ. ಊರಿಗೆ ದೇಶಕ್ಕೆ ಜಗಕ್ಕೆ ಸುಳ್ಳು ಹೇಳಿದರೂ ಕೂಡ ಸತ್ಯ ಏನೆಂಬುದು ಆತ್ಮಕ್ಕೆ ಸ್ಪಷ್ಟವಾಗಿರುತ್ತದೆ. ಅದನ್ನು ಮುಚ್ಚಿಡಲು ಸಾಧ್ಯವಿಲ್ಲ. ಎಲ್ಲರ ಒಳಗೂ ಒಬ್ಬ ತುಂಟ ನಿದ್ದಾನೆ ಅವನು ಸತ್ಯವನ್ನು ಅರಿತಿರುತ್ತಾನೆ. ಸಾವು ಎಂಬುದು ಬಯಸದೆ ಬರುವಂತಹ ನೆಂಟ .ಹಾಗಾಗಿ ಬದುಕಿರುವ ಸ್ವಲ್ಪ ಸಮಯದಲ್ಲಿ ಸತ್ಯವನ್ನು ಪರಿಪಾಲಿಸುವ ಅಗತ್ಯತೆ ಇದೆ .
ಬಹಳ ಅರ್ಥಪೂರ್ಣ ಕವನ .ಚೆನ್ನಾಗಿದೆ ಶುಭವಾಗಲಿ

ತ್ರಿನೇತ್ರಜ
[4/26, 12:28 PM] Wr Shindhe: ಕವಿಯತ್ರಿ *ಪ್ರೇಮ್* ಮೇಡಂ ಅವರ *ಸತ್ಯಸಂಧತೆ* ಜೀವನದಲ್ಲಿ ಸತ್ಯಕ್ಕೆ ಕೊಡಬೇಕಾದ ಬೆಲೆ ಮತ್ತು ಇಡಬೇಕಾದ ಅದರ ನೆಲೆ ಎಲ್ಲಿ ಎಷ್ಟು ಹೇಗೆ ಅನ್ನೋದು ಅತ್ಯಂತ ಸ್ಪಷ್ಟವಾಗಿ ಸುಂದರ ಉಪಮೇಗಳ ಮೂಲಕ ಹೇಳಹೊರಟಿದ್ದಾರೆ.ಸತ್ಯವನ್ನೋದು ದೂರವಿಟ್ಟರೆ ಬದುಕಿಂದ ಅದರಿಂದ ಆಗಬೇಕಾಗದ ಸಮಸ್ಯೆಗಳು ಪ್ರತಿ ಸಾಲಲ್ಲಿ ಅಡ್ಡ ನಿಂತು ಕೈ ಬೀಸುತ್ತಿವೆ👌🏻
*ಮಾವಿನ ತಳಿರು ಹೇಗೆ ಹಸಿರಾಗಿ ಇರ್ತವೆವೋ ಹಾಗೆ ಮಾತಲ್ಲು ಹಸಿರಿರಬೇಕು.ಆ ಹಸಿರು ಇರಬೇಕಾದರೆ ಅಲ್ಲಿ ಸತ್ಯದ ಛಾಯೆ ಇರಬೇಕು.ಬರಿ ಅಮೃತ ಕಲಶ ಅಂತಾ ಹೆಸರಿಟ್ಟರೆ ಸಾಕೆ ಅದರಲ್ಲಿ ಅಮೃತವಿದ್ದರೆ ಮಾತ್ರ ಅದಕ್ಕೆ ಅರ್ಥ ಮತ್ತು ಅದರ ಒಳಮರ್ಮಗಳ ಮಾಯೆ ತಿಳಿಯುವುದು ಹಾಗೆ ಜೀವನದಲ್ಲಿ ಮನುಷ್ಯ ಅಂತಾ ಮಾತ್ರ ಇದ್ದರೆ ಸಾಕೆ ಅವನೊಳಗೆ ನಾಗರಿಕತೆ ಸತ್ಯ ಪ್ರಮಾಣಿಕತೆ ನಿಸ್ವಾರ್ಥತತೆ ಇತ್ಯಾದಿಗಳಿದ್ದಾಗ ಮಾತ್ರ ಆತ ಮನುಷ್ಯನಾಗಬಲ್ಲ.👌🏻ಜೀವನದಲ್ಲಿ ಸತ್ಯದ ಮಾರ್ಗ ಹಿಡಿದವನಿಗೆ ಒಂದು ವಿಶಿಷ್ಟ ಶಕ್ತಿ ಇರುತ್ತೆ ನೋವಲಿ ನಗುವ,ನಗುವಲಿ ಅಳುವ ಕಾರಣ ಅವನಿಗ ಜೀವನದ ನೈತೀಕ ಮೌಲ್ಯಗಳರಿತವನು ಅಂತಹ ಅರಿವು ನಿಮಗೆ ಬೇಡವೆ...?ಸಾವು ಅನಿರೀಕ್ಷಿತ ಹೇಗೋ ಅದು ಬರುವವರೆಗೆ ಎಲ್ಲರೊಟ್ಟಿಗಿನ ಸಂತೋಷದ ಕ್ಷಣಗಳು ಕಳೆದು ಬಿಡಬೇಕು ಇಲ್ಲಾ ಕಳಿತಾ ಇರಬೇಕು.👌🏻ಸಮಾಜಕ್ಕೆ ನೀನು ಎಷ್ಟೆ ಸುಳ್ಳು ಹೇಳಿ ನಂಬಿಸಿದರು ನಿನ್ನ ಆತ್ಮಸಾಕ್ಷಿ ಮಾತ್ರ ಅಸಲಿ ಮುಖ ನೋಡಿರುತ್ತೆ ಅದಕ್ಕೆ ಮಾತ್ರ ನಿ ವಂಚಿಸಲಾರೆ ಸುಳ್ಳು ಬರಿ ಪ್ರತಿಯೊಂದರ ಪೊಳ್ಳುತನಗಳ ಗಳಿಕೆ ಮಾಡಿಸುತ್ತೆ ಅದು ಗಟ್ಟಿಯಲ್ಲ.ಗಟ್ಟಿಯಾಗಿ ಬೆಳಿಬೇಕು ಬೆರಿಬೇಕು ಅಂದ್ರೆ ಸತ್ಯವನ್ನ ಹೇಳಬಿಡಬೇಕು ಕೇಳಿಬಿಡಬೇಕು.👌🏻ಕುರುಡ ಕೂಡಾ ನೋಡಬಲ್ಲ ಕಿವುಡನೂ ಕೇಳಬಲ್ಲ ಅದು ಅವರಿಗಿರುವ ಸತ್ಯದ ದೃಷ್ಟಿ ಮತ್ತು ಆಲಿಸುವಿಕೆ ಶಕ್ತಿ.ಅವರಂತೆ ನೀನು ಸುಳ್ಳನೂ ನೋಡಿ ಕುರುಡಾಗಿರು ಕೇಳಿ ಕಿವುಡಾಗಿರು ಸತ್ಯಕ್ಕೆ ಮಾತ್ರ ಕಣ್ಣು ಕಿವಿ ಹೃದಯ ಎಲ್ಲವೂ ತೆರೆದಿಡು ಸುಳ್ಳಿನ ಗಂಟು ಮನೆ ಮನ ಊರಾಚೆ ಇಡು  
*ಇಲ್ಲವಾದಲ್ಲಿ ಸತ್ಯದೊಂದಿಗೆ ಸಂಧಿಸಿ ಸೆಣಸುವ ಶಕ್ತಿ ನಮ್ಮಲ್ಲೆಂದಿಗೂ ಹುಟ್ಟದು ಅನ್ನೋ ನೇರ ಸಂದೇಶ*

*ರಾಜೇಶ ಎಲ್ ಶಿಂಧೆ*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ