22.
ಮೂವರಲ್ಲಿ ಕೊನೆಯ’ವರ’
ಬ್ರಹ್ಮ ವಿಷ್ಣು ಮಹೇಶ್ವರ’
ಬೇಡಿದವರಿಗೆ ಕೊಡುವ ವರ
ಮಾಯೆಯಿಹುದು ಈ ದೇವರ//
ಎಲ್ಲರಿಗೂ ಪ್ರಿಯರಾದವ
ಷಣ್ಮುಖಗೆ ತಂದೆಯಾದವ
ಗಣಪಗೆ ಶಿರ ಜೋಡಿಸಿದವ
ಪಾರ್ವತಿಯ ಹೃದಯದಿ ನೆಲೆಸಿದವ//
ನೆನೆಯಬೇಕು ಮನವೇ ನಿರಂತರ
ಭಜಿಸಿದರೆ ಮನವೇ ನೀ ಅಜರಾಮರ
ಜಪಿಸು ಶಿವನ ನಿತ್ಯ ಸೋಮವಾರ
ಗಳಿಸು ನಿನಗೆ ಕೋಟಿ ಕೋಟಿ ವರ//
ಷಣ್ಮುಖನ ಪಿತಾಶಿರ
ಗಂಗೆ ಹೊತ್ತ ಗಂಗಾಧರ
ದುರ್ಗೆಯ ಹೊತ್ತ ಮಹೇಶ್ವರ
ಶಿವ ಅರ್ದನಾರೀಶ್ವರ//
ಭಕ್ತರ ರಕ್ಷಕ ರಕ್ಷಕ ಇವ
ಶಿಷ್ಠರಿಗೆ ಕರುಣೆ ನೀಡುವವ
ದೇವರ ದೇವನು ಶಿವನು ಇವ
ಮಹದೇವ ನಮ್ಮ ಈ ಶಿವ//
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ