29.
ರಕ್ಷಿಸೆಮ್ಮ ದೇವನೆ
ದಾರಿ ಕಾಣದಾಗಿದೆ
ಈಶ್ವರ ದೇವನೇ
ನಿನ್ನ ನಾಮ ಸ್ಮರಣೆಯೇ
ನಮ್ಮ ಕೆಲಸವಾಗಿದೆ//
ನಿನ್ನ ಕರೆಯಲಾರದೆ
ಬೆಂಡಾಗಿ ಹೋಗಿದೆ
ತಂದೆ ಬಂದು ಕಾಪಾಡಿ
ರಕ್ಷಿಸೆಮ್ಮ ಶಂಕರ//
ಕಲ್ಲು ಮುಳ್ಳು ಜೀವನಕೆ
ನಿನ್ನ ರಕ್ಷೆ ಬೇಕಿದೆ
ಅನ್ನ ನೀರ ಆಹಾರಕೆ
ನಿನ್ನ ಬಿಕ್ಷೆ ಬೇಕಿದೆ//
ಈಶ ನೀನು ಜಗದೊಡೆಯ
ಕಾಯು ನಮ್ಮ ಅನವರತ
ನೀನಿಲ್ಲದೆ ಬದುಕಿಲ್ಲ
ಮಂಜುನಾಥ ಸ್ವಾಮಿಯೇ//
ನನ್ನ ನಲಿವು ನೋವು ಎಲ್ಲ
ನಿನ್ನ ಶಕ್ತಿಯಾಗಿದೆ
ನನ್ನ ಸ್ಥೈರ್ಯ ಧೈರ್ಯವೆಲ್ಲ
ನಿನ್ನ ಪ್ರಸಾದವಾಗಿದೆ//
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ