ಭಾನುವಾರ, ಮಾರ್ಚ್ 25, 2018

214. ಶಿವಸ್ತುತಿ-29

29.

ರಕ್ಷಿಸೆಮ್ಮ ದೇವನೆ

ದಾರಿ ಕಾಣದಾಗಿದೆ
ಈಶ್ವರ ದೇವನೇ
ನಿನ್ನ ನಾಮ ಸ್ಮರಣೆಯೇ
ನಮ್ಮ ಕೆಲಸವಾಗಿದೆ//

ನಿನ್ನ ಕರೆಯಲಾರದೆ
ಬೆಂಡಾಗಿ ಹೋಗಿದೆ
ತಂದೆ ಬಂದು ಕಾಪಾಡಿ
ರಕ್ಷಿಸೆಮ್ಮ ಶಂಕರ//

ಕಲ್ಲು ಮುಳ್ಳು ಜೀವನಕೆ
ನಿನ್ನ ರಕ್ಷೆ ಬೇಕಿದೆ
ಅನ್ನ ನೀರ ಆಹಾರಕೆ
ನಿನ್ನ ಬಿಕ್ಷೆ ಬೇಕಿದೆ//

ಈಶ ನೀನು ಜಗದೊಡೆಯ
ಕಾಯು ನಮ್ಮ  ಅನವರತ
ನೀನಿಲ್ಲದೆ ಬದುಕಿಲ್ಲ
ಮಂಜುನಾಥ ಸ್ವಾಮಿಯೇ//

ನನ್ನ ನಲಿವು ನೋವು ಎಲ್ಲ
ನಿನ್ನ ಶಕ್ತಿಯಾಗಿದೆ
ನನ್ನ ಸ್ಥೈರ್ಯ ಧೈರ್ಯವೆಲ್ಲ
ನಿನ್ನ ಪ್ರಸಾದವಾಗಿದೆ//
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ