ಮಂಗಳವಾರ, ಜನವರಿ 29, 2019

738. ಆಶಯ

ಕಳೆಯಲಿ

ಹಿರಿ-ಕಿರಿಯರ ಮೊಗದಲಿ
ಮಂದಹಾಸ ಮೂಡಲಿ
ಜನರ ಬಾಳ ಬಂಡಿಯಲ್ಲಿ
ಕಷ್ಟವೆಲ್ಲ ಕಳೆಯಲಿ..

ಭಯದ ವಾತಾವರಣ ಹೋಗಿ
ಸತ್ಯ ಬೆಳಕು ಬೆಳಗಲಿ
ಮನದ ಕಸವನ್ನೆಲ್ಲ ಗುಡಿಸಿ
ಬದುಕ ಕತ್ತಲು ಸರಿಸಲಿ...

ಬೇಧ ಭಾವವೆಲ್ಲ ಅಳಿಸಿ
ಜಾತಿ ಮತವು ತೊಲಗಲಿ
ಮನದ ಪರದೆ ಸರಿಸಿ ಬಂದು
ಪ್ರೇಮ ಕಾವ್ಯ ಚಿಗುರಲಿ..

ದ್ವೇಷವೆಲ್ಲ ಕರಗಿ ಹೋಗಿ
ಸಾಮರಸ್ಯ ಹೆಚ್ಚಲಿ
ನಾಡು ನುಡಿಯ ಗೌರವವು
ಬಳಸಿ, ಉಳಿಸಿ ಉದಿಸಲಿ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ