ಮಕ್ಕಳಿಗೆ..
ಕೇಳಿರಿ ಮಕ್ಕಳೆ ಹೇಳುವೆ ನಿಮಗೆ
ಗಿಡಮರ ಕಡಿಯಲು ಬೇಡಿ
ಗಿಡವನು ನೆಟ್ಟು ಗೊಬ್ಬರ ಹಾಕಿ
ನಿತ್ಯವೂ ನೀರನು ನೀಡಿ...
ಲಾಲಾಲಾಲಾ...
ಮಣ್ಣದು ನಮಗೆ ಅನ್ನವ ನೀಡುವ
ರೈತನ ಬೆಣ್ಣೆಯ ಹಾಗೆ..
ವಿಷವನು ಹಾಕಿ ಮಣ್ಣನು ಕೆಡಿಸಿ
ಪಡುವುದು ಬೇಡ ಬೇಗೆ..//
ಲಾಲಾಲಾಲಾ
ಚಾಕ್ಲೇಟ್ ಲೇಸ್ ಚಿಪ್ಸನು ತಿಂದು
ಪ್ಲಾಸ್ಟಿಕ್ ಬಿಸಾಕದಿರಿ ಬದಿಗೆ..
ಕಸದ ಡಬ್ಬವನು ಉಪಯೋಗಿಸಿ ಎಂದೂ
ಸ್ವಚ್ಛತೆಯಲಿ ಕೈ ಜೋಡಿಸಿ...
ಲಾಲಾಲಾಲಾ..
ಇಂದಿನ ಮಕ್ಕಳು ನಾಳಿನ ಹಿರಿಯರು
ಪಡೆಯಿರಿ ವಿದ್ಯೆಯ ಸರಿಯಾಗಿ
ದೊಡ್ಡ ಗುರಿಯಿರಲಿ, ದೂರದ ಕನಸಲಿ
ಬೆಳೆಯಿರಿ ಸಮಾಜಕೆ ನೆರಳಾಗಿ
ಬೆಳೆಯಿರಿ ಪರೋಪಕಾರಿಗಳಾಗಿ..
ಲಾಲಾಲಾಲಾ..
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ