ಸೋಮವಾರ, ಫೆಬ್ರವರಿ 25, 2019

803. ವಿಮರ್ಶೆ-7

7. ಸಿರಾಜ್ ಸರ್

***ತೋಟ***

ನಡೆದಾಡುವ ತೋಟದಲ್ಲಿ
ಮಾತನಾಡುವ ಮಹಾಮನೆ
ಮನೆಯು ಮಾತು ನಿಲ್ಲಿಸಿದರೆ
ತೋಟ ವಾಗುವುದು ಕೊನೆ ೧

🥑🥑🥑🥑🥑🥑🥑

ವಾವ್..ಕವಿಭಾವ ಸೂಪರ್. ಹೋಲಿಕೆ ಅನೂಹ್ಯ! ಬಸವಣ್ಣನವರ ಕಾಲೇ ಕಂಬ, ದೇಹವೇ ದೇಗುಲ ಎಂಬ ವಚನದ ನೆನಪಾಯ್ತು ನಿಮ್ಮ ಸಾಲುಗಳನ್ನು ಓದುವಾಗ.
🥑🥑🥑🥑🥑🥑🥑🥑

ವಿದ್ಯುತ್ತಿನ ದೀಪಗಳೆರಡು
ಧ್ವನಿವರ್ಧಕದ ಜೊತೆಗೆ
ಶಬ್ದಕೋಶಗಳೂ ಎರಡು
ಮರ ರೆಂಬೆ ಕೊಂಬೆ ಬೇಲಿ
ಒಡೆಯನ ಆರೈಕೆಯಲ್ಲರಳುವ
ಉನ್ಮಾದದ ಹೂವುಗಳು ೨

🥑🥑🥑🥑🥑🥑🥑

ವಾವ್.. ನಿಮ್ಮ ರೂಪಕ ಶೈಲಿಗೆ ನೀವೇ ಸಾಟಿ ಗುರುಗಳೆ. ಅದೆಲ್ಲಿಂದ ಹುಡುಕಿ ಕಟ್ಟಿಕೊಂಡು ತಂದಿರೋ ಸಾಲು ರೂಪಕಗಳ! ಕಣ್ಣು ಬಾಯಿ ಕಿವಿಗಳನ್ನೂ ಹೀಗೆ ವರ್ಣಿಸಬಹುದೆಂಬುದ ನಿಮ್ಮಿಂದ ಕಲಿತೆ.

🥑🥑🥑🥑🥑🥑🥑🥑

ಕೊಂಚ ಹ್ಯಾಮಾರಿದರೂ
ಅಹಂಕಾರದ ಕಳ್ಳರು ನುಗ್ಗಿ
ಲೂಟಿ ಮಾಡಲೂ ಸೈ
ಅದಕ್ಕಾಗಿ ಕಾಯ್ದಿರಿಸುತ್ತಾನೆ
ಮನೆಯ ಬೀಗದ ಕೈ ೩

🥑🥑🥑🥑🥑🥑🥑
ಹ್ಯಾಮಾರು-ಏಮಾರು ಇರಬಹುದೇನೋ. ಪದ ಸಂಪತ್ತು ಕಡಿಮೆಯಿದೆ ನನ್ನಲಿ. ಖಂಡಿತ ಗುರುಗಳೇ. ಕನ್ನಡ ಸಿನೆಮಾದ "ಯೌವನದ ಹೊಳೆಯಲ್ಲಿ ಈಜಾಟವಾಡಿದರೆ ಓ ಹೆಣ್ಣೇ ಸೋಲು ನಿನಗೆ..." ಈ ಸಾಲುಗಳು ನೆನಪಿಗೆ ಬಂದವು.

🥑🥑🥑🥑🥑🥑🥑🥑

ತೋಟದ ಸೌಂದರ್ಯದ
ಮೈಮರೆಯುವುದು ಖರೆ
ಬೀಗದ ಕೈ ಕಳೆದುಕೊಂಡು
ಅನುಭವಿಸಿದ್ದಾನೆ ತೊಂದರೆ ೪

🥑🥑🥑🥑🥑🥑🥑

ಸರಳ ಪ್ರಾಸಬದ್ಧ ನುಡಿಗಳಲಿ ಹಿರಿಯಾರ್ಥ. ನಮ್ಮ ಮಂಕುಬುದ್ಧಿಯಿಂದಾಗಿ ನಾಳಿನ ಬಗ್ಗೆ ಗೊತ್ತಿದ್ದರೂ ಮರೆತು ನಾವೇ ಎಂಬಂತೆ ಕುಣಿಯುವ ಮನುಜನ ಪರಿ...
🥑🥑🥑🥑🥑🥑🥑🥑

ಬೀಗದ ಕೈ ಭದ್ರವಾಗಿಡಲು
ಮಾಡಿಕೊಂಡಿದ್ದಾನೆ ವಿಚಾರದಿ
ಹೊಲಿದು ಅರಿವಿನ ಚೀಲ
ಒಡೆಯ ಎಚ್ಚರದಿಂದಿರಬೇಕು
ಇರುವತನಕ ತೋಟದ ಕಾಲ

🥑🥑🥑🥑🥑🥑🥑
ಅಂದದ ಕೊನೆ, ಚಂದದ ಪದಗಳಿಗೆ ಭಾಷಾ ಚಿಹ್ನೆಗಳಿಲ್ಲದೆ ಕೊರತೆಯಾಯ್ತೇನೋ ಅನಿಸಿತು.!! ಹೀಗೆರಡು ಚಿಹ್ನೆಗಳು ಮದುವಣಗಿತ್ತಿಯ ಕುಂಕುಮದಂತೆ ಹೊಳೆಯುತ್ತಿದ್ದುವೇನೋ. ಅಂದದ ಕವನಕ್ಕೆ ಸಧನ್ಯವಾದಗಳು..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ