ಸೋಮವಾರ, ಫೆಬ್ರವರಿ 25, 2019

808. ವಿಮರ್ಶೆ-12

12. ಸುಧಾ ಅಮ್ಮನವರ

*ಭದ್ರತೆ*

ಇತ್ತೀಚೆಗೇಕೋ
ತುಂಬಾ ಮರೆವು
ವಯಸಿಗೋ
ಒತ್ತಡಕ್ಕೋ...!!
🥕🥕🥕🥕🥕🥕🥕🥕
ಎಲ್ಲರಿಗೂ ಒತ್ತಡ ತಾಂತ್ರಿಕ ಯುಗದ ಯಾಂತ್ರಿಕ ಜೀವನದಲಿ. ತರಂಗಗಳ ಉಪಯೋಗ ಮರೆವಿಗೆ ಕಾರಣ. ಸತ್ಯದ ಸಾಲುಗಳು.
🥕🥕🥕🥕🥕🥕🥕

ಊರಿಗೆ ಹೋಗುವ
ಮುನ್ನ
ಎಲ್ಲ ವಸ್ತುಗಳನ್ನೂ
ಭದ್ರವಾಗಿಟ್ಟು
ಬೀಗ ಹಾಕಿ
ಬೀಗದ ಕೈ
ಇಡುವ ಜಾಗ
ಬದಲಾಯಿಸುವ
ಅಭ್ಯಾಸ...
ಕಳ್ಳಕಾಕರಿಗೆ
ಸಿಗಬಾರದಲ್ಲ...!!
🥕🥕🥕🥕🥕🥕🥕🥕
ಪ್ರತಿಯೊಬ್ಬರ  ಕತೆಯೂ ಇಷ್ಟೆ. ಕಳ್ಳರೂ ಇದನ್ನೆ ಮಾಡುವರೇನೋ. ತಾನು ಕದ್ದದ್ದು ಇತರರಿಗೆ ಸಿಗಬಾರದಲ್ಲಾ..😆😆😁
🥕🥕🥕🥕🥕🥕🥕
ಈ ಸಲ
ಹೋಗುವಾಗ
ಹಾಗೆಯೇ
ಬದಲಾಯಿಸುವ
ಪ್ಲಾನಿತ್ತು...
ಒಂದೊಳ್ಳೆ
ರಹಸ್ಯ ತಾಣದಲ್ಲಿ ...
🥕🥕🥕🥕🥕🥕🥕
ನಮ್ಮ ಮನದ ಮಾತಿನಂತೆ ನಡೆವವರು ನಾವು . ಮನ ಆಗಾಗ ಬದಲಿಸುವಂತೆ ಕರೆಯಿತ್ತರೆ ನಾವು ಮಾಡುವವರಲ್ಲವೆ...
🥕🥕🥕🥕🥕🥕🥕

ಎಲ್ಲವನ್ನೂ
ಭದ್ರಪಡಿಸಿ
ಬೀಗ ಹಾಕಲು
ಹೋದರೆ
ಬೀಗದ ಕೈಯ್ಯೇ
ಸಿಗಲಿಲ್ಲ...
🥕🥕🥕🥕🥕🥕🥕
ಅಗಾ....ಈಗ ಬಂತು ಮರೆವು. ಅರ್ಧ ಜೀವನವ ಹುಡುಕಾಟ, ಕಾಯುವಿಕೆಯಲ್ಲೆ ಕಳೆಯುತ್ತೇವೆ ನಾವು.ನೈಜತೆಯ ಬರಹ.
🥕🥕🥕🥕🥕🥕🥕🥕

ಊರಿಗೆ
ಹೊರಡಲು
ಸಮಯವಾಗಿತ್ತು ...
ಎಲ್ಲರೂ ಅವಸರ
ಮಾಡುವವರೇ ...
ಬೀಗದ ಕೈ
ಸಿಗಲೇ ಇಲ್ಲ...
ಯಾರೂ ಬಂದು
ನಿನ್ನ ಗಂಟು ಕದಿಯಲ್ಲ
ಹೊರಡು ಎಂದ
ಮಗರಾಯ...
ನನಗೋ ಒದ್ದಾಟ...
ಗತ್ಯಂತರವಿಲ್ಲದೆ
ಹೊರಟೆ ...
🥕🥕🥕🥕🥕🥕
ಕೆಲವೊಮ್ಮೆ ಅನಿವಾರ್ಯವಾದರೂ ನಮಗೆ ನಮ್ಮ ಮನಸು ಕೈಲೇ ಇರಲ್ಲ. ಒತ್ತಡ ಅತಿರೇಖಕ್ಕೇರಿ ಬಿಡುತ್ತದೆ.
🥕🥕🥕🥕🥕🥕

ಮನಸಲ್ಲೇ ಬೀಗದ ಕೈ
ಹುಡುಕಿದ್ದೇ ಹುಡುಕಿದ್ದು
ಆದರೂ ಸಿಗಲಿಲ್ಲ...
ಟೋಲ್ ಗೇಟ್ ಗೆ
ಮಗ ಚಿಲ್ಲರೆ ಕೇಳಿದ..
ಜಾಕೀಟಿನಲ್ಲಿದ್ದ
ಪಸ್೯ನಲ್ಲಿ
ದುಡ್ಡಿನ  ಜೊತೆಗೆ
ಬೀಗದ ಕೈ
ನಗುತ್ತಿತ್ತು ...!!

🥕🥕🥕🥕🥕🥕🥕
ಸುಂದರ ಎಂಡಿಂಗ್. ಸರಳ ಸುಂದರ ಭಾವಕ್ಕೆ ಸಹೃದಯದ ಧನ್ಯವಾದಗಳು.
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ