8. 🌹ನಾಗಮ್ಮನವರ
ಹೃದಯ ಮಂದಿರದಿ
ಹೃದಯ ಮಂದಿರದಲ್ಲಿರುವೆ
ಬೀಗವೇತಕೋ ಗೆಳೆಯಾ...
ಬಿಡದಿರು ಪ್ರೀತಿಯಾ
ಕೀಲಿ ಕೈಯಾ..||
🍑🍑🍑🍑🍑🍑🍑
ವಾವ್.. ಗೆಳೆಯನಿಗೆ ಮೀಸಲಿಟ್ಟ ಕವನ. ಹೌದು ಪ್ರೀತಿಯ ಕೊಂಡಿಯೊಂದು ಕೈಲಿದ್ದರೆ ಪ್ರಪಂಚದಿ ಯಾವ ಕಾರ್ಯವನ್ನಾದರೂ ಮಾಡಬಲ್ಲೆವು. ನಂಬಿಕೆಯಿರುವ ಹೋಪ್ಫುಲ್ ಮನುಜರಾಗಿರಬೇಕು ಅಷ್ಟೆ.
🍑🍑🍑🍑🍑🍑🍑
ಅಮಿತ ಪ್ರೇಮದಾದರವೂ
ಹೆಮ್ಮ ನಿನ್ನ ಸ್ವಾರ್ಥವು..
ಅಂತರಂಗವು ಪ್ರೀತಿ ರಾಗದಲಿ
ತುಂಬಿ ಹರಿಯಲಿ ಒಲವು..||
🍑🍑🍑🍑🍑🍑🍑🍑
ಹೆಮ್ಮ ಎಂದರೇನು? ತಿಳಿದಿಲ್ಲ ಅಮ್ಮಾ. ಒಲವು ತುಂಬಿ ಹರಿದಾಲೇ ಗೆಲುವು ನಮ್ಮದಾಗುವುದು. ನೈಜತೆ ಪಡಿಮೂಡಿದೆ ಕವಿಗಳೇ.
🍑🍑🍑🍑🍑🍑🍑
ರುಧಿರ ಕಣ ಕಣದಲೂ
ನೆನಪ ಹರಿಸುವೆ ನಿತ್ಯಾ...
ಅನವರತ ಮಿಡಿಯಲಿ ನಾಡಿ
ನನ್ನಿರುವು ನಿನ್ನೊಳಗೆ ಸತ್ಯಾ...||
🍑🍑🍑🍑🍑🍑🍑🍑
ಯಾವುದೇ ವ್ಯಕ್ತಿ ಪ್ರಪಂಚದಲಿ ಆಶಿಸುವುದು ಇದನ್ನೇ ಅಮ್ಮ. ಅದು ನಿಮ್ಮ ಕವನದುದ್ದಕೂ ಅನುರಣಿಸಿದೆ. ಇದೇ ಕವನದ ಸಾರ್ಥಕತೆಯ ಬಿಂಬ. ಅಲ್ಲಿ ನೈಜ ಭಾವಾಭಿವ್ಯಕ್ತಿಗೆ ಮಾತ್ರ ಜಾಗ.
🍑🍑🍑🍑🍑🍑🍑🍑
ಹೊರ ಬಾರೆನೋ ಗೆಳೆಯಾ
ಕೊನೆಯ ಗಳಿಗೆಯ ತನಕ
ಕ್ಷಣ ಕ್ಷಣ ವೂ ನೀನೆ ಜಪವೂ
ಕಳೆವೆ ಹೀಗೆ ಬದುಕ||
🍑🍑🍑🍑🍑🍑🍑
ಕೊನೆಯಲಿ ಕೀಲಿಕೈ ಸಿಗಬೇಕಿತ್ತಲ್ಲಾ.. ಇನ್ನೊಂದು ಚರಣ ಸೇರಿಸಿ ಮೇಡಂ. ಬದುಕನ್ನು ಸಾರ್ಥಕಗೊಳಿಸಿ.
ಧನ್ಯವಾದಗಳು.
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ