ಗುರುವಾರ, ಫೆಬ್ರವರಿ 28, 2019

818. ವಿಮರ್ಶೆ

ಶಶಿರೇಖಾ ಅವರ ಹರಸಿಬಿಡು...

ಆ ಕಾಲವೇ ಚಂದವಿತ್ತಾ
ಅಂತನಿಸುತ್ತಿದೆ ನನಗೆ
ಈಗೀಗ ಕಾಲ ಮಿತಿಗಳ
ಪರಿವಿಲ್ಲದೇ ಇದ್ದರಲ್ಲ....
💐💐💐💐💐💐

ಹಲವು ಹಿರಿಯರ ನುಡಿಯಿದು. ನಮ್ಮ ಬಾಲ್ಯದ ದಿನಗಳ ನೆನೆದರೆ ನಮಗನ್ನಿಸುವುದೂ ಅದೇ.
ಇದ್ದಾರಲ್ಲಾ.. ಆಗಬೇಕೇನೋ..
💐💐💐💐💐💐

ಗಡಿಯಿಲ್ಲ ಊರಿಲ್ಲ
ಕೇರಿಯಿಲ್ಲ ಜಾತಿಯ
ಗೊಡವೆಯಂತೂ ಅಲ್ಲಿ
ನುಸುಳಲೇ ಇಲ್ಲ....
💐💐💐💐💐💐💐
ಸುಭದ್ರ ಕುಮಾರಿ ಚೌಹಾನರ ಬಾರ್ ಬಾರ್ ಆತೀ ಹೇ ಮುಝ್ಕೋ ಮಧುರ್ ಯಾದ್ ಬಚ್ಪನ್ ತೇರಿ.. ಗಯಾ ಲೇ ಗಯಾ ಜೀವನ್ ಕಾ ಸಬ್ ಸೇ ಮಸ್ತ್ ಖುಷಿ ಮೇರಿ...
ಊಂಚ್ ನೀಛ್ ಕಾ ಜ್ಞಾನ್ ನಹ್ಙೀ ಥಾ.. ಚುವಾ ಅಚೂತ್ ಕಿಸ್ ನೇ ಜಾನಿ... ಈ ಸಾಲುಗಳು ನೆನಪಾದವು.. ನಿಮ್ಮ ಕವನದ ಸಾಲುಗಳನ್ನೋದುತ್ತಿರಲು..
💐💐💐💐💐💐

ಬಟ್ಟೆ ಬಂಗಾರಕಾಗಿ
ಕಾದಾಡುವ ಸ್ಥಿತಿಯು
ನಾನು ನನ್ನದು ಎಂಬ
ಸ್ವಾರ್ಥತೆ ಅವರಲಿರಲಿಲ್ಲ....
💐💐💐💐💐💐💐
ಅಜ್ಜಿ ನೆನಪಾದರು ಒಮ್ಮೆಗೆ.. ಭಾವುಕಳಾದೆ! ಅಜ್ಜಿಯ ದೊಡ್ಡಮ್ಮನ ಬಳಿ ಒಂದು ಬುಟ್ಟಿ ಚಿನ್ನದ ಒಡವೆಗಳಿದ್ದವಂತೆ. ಅವರು ಹೋದಲ್ಲೆಲ್ಲಾ ಧರಿಸಿ, ಉಳಿದ ಚಿನ್ನವನ್ನು ಬುಟ್ಟಿಯಲ್ಲಿಟ್ಟು ಹೋಗುತ್ತಿದ್ದರಂತೆ! ಆದರೆ ಅಜ್ಜಿಗೆ ಉಡಲು ಸೀರೆಯಿಲ್ಲದೆ ಒಂದೇ ಸೀರೆಯನ್ನು ಹರಿದು ಒಂದು ತುಂಡನ್ನುಟ್ಟು ಮತ್ತೊಂದು ತುಂಡನ್ನು ಒಗೆದು ಒಣಗಿಸಿ ರಾತ್ರಿ ಹೊದ್ದುಕೊಳ್ಳಲು ಬಳಸುತ್ತಿದ್ದರಂತೆ! ಆದರೂ ಸರಕಾರ ಕೊಡಲೆಂದು ಕೇಳುತ್ತಿರಲಿಲ್ಲ, ಯಾರದೂ ಕದಿಯುತ್ತಿರಲಿಲ್ಲ. ನಿಮ್ಮ ಮಾತು ನಿಜ!
💐💐💐💐💐💐💐

ಅಸಲು ಅವರಿಗೆಲ್ಲ
ದೇಶಗಳ ರಚನೆಯ
ಅರಿವೇ ಇರಲಿಲ್ಲವಲ್ಲ
ಆ ಕಾಲ ಎಷ್ಟು ಚಂದಿತ್ತಲ್ಲ....
💐💐💐💐💐💐
ಖಂಡಿತಾ.. ಅರಿವೇ ಗುರು ಎಂಬ ಗಾದೆಯಿದ್ದರೂ ಬುದ್ಧಿವಂತರ ಜಿಲ್ಲೆ ಎಂದು ಕರೆಸಿಕೊಳ್ಳುವ ಉಡುಪಿ-ದ.ಕ ಜಿಲ್ಲೆಗಳಲ್ಲೇ ಅತಿ ಹೆಚ್ಚು ಮತಾಂಧರಿದ್ದು ಗಲಾಟೆಗಳಾಗುವಾಗ ಅರಿವಿಲ್ಲದಿರುವ ಜೀವನವೇ ಪ್ರಶಾಂತ ಎಂದೆನಿಸುತ್ತದೆ. ಸಮುದ್ರದ ಕಪ್ಪೆಗಿಂತ ಬಾವಿಯ ಕಪ್ಪೆಯೇ ನನ್ನ ಬಾವಿ ದೊಡ್ಡದು ಎಂಬ ಸಣ್ಣ ಭ್ರಮೆಯಲ್ಲಿ ಬೀಗುತ್ತಾ ಬದುಕುತ್ತದೆ!
💐💐💐💐💐💐

ಅವರದೊಂದೇ ಜಾತಿ
ಮಾನವನೆಂಬುವದದು
ಅವರಿಗ್ಯಾವ ಜ್ಞಾನ ವಿಜ್ಞಾನಗಳ
ಪರಿವೆಯಂತೂ ಇರಲಿಲ್ಲ....
💐💐💐💐💐💐
ಜಾತಿ ಮತ ಪಂಥಗಳ ರಾಜಕೀಯ, ಗಲಾಟೆ,ದೊಂಬಿ ಪ್ರಾರಂಭವಾದುದು ಇತ್ತೀಚಿನ ವರುಷಗಳಲಿ. ರಾಜಕೀಯದ ಪರಮಾವಧಿಯಲಿ. ಸ್ವಾತಂತ್ರ್ಯ ಹೋರಾಟದ ದಿನಗಳಲಿ ಭಾರತವೆಲ್ಲಾ ಒಂದಾಗಿತ್ತು. ನಿಮ್ಮ ಮಾತು ಅಕ್ಷರಷಃ ನಿಜ.
💐💐💐💐💐💐

ಬುದ್ಧಿಯಾದರೂ ಯಾಕೆ
ವಿಕಸನವಾಯಿತೋ ಭಗವಂತಾ
ಶುರುವಾಯಿತಲ್ಲ ನಂದು ನಿಂದಂತ
ಯುದ್ಧ ಸಾರಿದರು ಸಾವು ಬರಲಂತ....
💐💐💐💐💐💐
ಜಗತ್ತು ಚಿಕ್ಕದಾಯಿತು, ಮನವೂ ಚಿಕ್ಕದಾಯಿತು. ಮನಸುಗಳು ಮುದುಡಿದವು. ಅದುವೇ ತಮ್ಮ ಸ್ವಾರ್ಥತೆಗೆ ಕಾರಣವಾಯ್ತೇನೋ.
💐💐💐💐💐💐💐
ಧರ್ಮ ಸಂಸ್ಥಾಪನಾರ್ಥಾಯ
ಅಂತ ನೀನು ಮತ್ತೆ ಅವತಾರ
ತಾಳದಿದ್ದರೂ ನಡೆದೀತು ದೇವ
ಅಲ್ಲಿಂದಲೇ ಹರಸಿಬಿಡು ಮತ್ತೆ
ಆದಿಮಾನವನ ಕಾಲ ಶುರುವಾಗಲಂತ.....
💐💐💐💐💐💐💐
ಮನದಿಂಗಿತ ಉತ್ತಮ. ಈಗ ದೇವ ಯಾವುದಾದರೂ ಅವತಾರವೆತ್ತಿ ಬಂದು ನಾನು ದೇವರೆಂದರೂ ಯಾರೂ ನಂಬಲಿಕ್ಕಿಲ್ಲ, ಬದಲಾಗಿ ರಾಜಕೀಯಕ್ಕಾಗಿ ವೇಷ ಮರೆಸಿಕೊಂಡು ಬಂದನೆಂದು ಕಲ್ಲು ಹೊಡೆದು ಕಳಿಸಿಯಾರು..

ಉತ್ತಮ ಕವನಕ್ಕೆ ಅಭಿನಂದನೆಗಳು..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ