ಆಗಬೇಕಲ್ಲವೇ?
ನಾನಾಗಬೇಕು ಸುಧಾರಿತ ತಳಿ
ನನ್ನಲ್ಲಾಗಬೇಕು ನಿರಂತರ ಸುಧಾರಣೆ!!
ವಿಜ್ಞಾನ ತಂತ್ರಜ್ಞಾನಕ್ಕೆ ತಕ್ಕವನಾಗಿ!
ಮನುಜ ಮತ, ವಿಶ್ವ ಪಥಕ್ಕೆ ಸರಿಯಾಗಿ!!
ನನ್ನ ಹೃದಯ ಬಾಯ್ತೆರೆಯಬೇಕು
ಮನವು ಅಗಲವಾಗಬೇಕು
ಕಲ್ಮಶವ ಹೊರಹಾಕಿ ಶುದ್ಧೀಕರಿಸಬೇಕು!!
ಮೆದುಳು ಸ್ಮಾರ್ಟಾಗಬೇಕು!!
ಸಹಾಯ, ಕರುಣೆಯೆಂಬ ಗಿಡಗಳನು ಮನದಲಿ ನೆಡಬೇಕು..
ಪರೋಪಕಾರದ ಬೇರು ಆಳಕ್ಕಿಳಿಯಬೇಕು..
ಸ್ವಾರ್ಥದ ಕಳೆಯ ಕಿತ್ತೊಗೆಯಬೇಕು!!
ಸಂತಸದ ಹೂಗಳು ಅರಳಬೇಕು!!!
ಮನಃಶಾಂತಿಯ ಟೊಂಗೆಗಳು ಹರಡುತ್ತಿರಲಿ
ಕ್ಷಮೆಯ ಮೊಗ್ಗುಗಳು ಹೊರಬರುತ್ತಿರಲಿ..
ದ್ವೇಷದ ಇಂಗಾಲದ ಡೈ ಆಕ್ಸೈಡ್ ಪೂರ್ತಿ ಹೊರಹೋಗಲಿ
ದಯೆಯ ಆಮ್ಲಜನಕ ಒಳಬರಲಿ...
ನೆನಪ ಮೂಟೆಗಳು ಹಂಚುವಂತಾಗಲಿ
ಕಹಿ ಘಟನೆಗಳ ದೂರ ಒಗೆಯುವಂತಾಗಲಿ
ಸಿಟ್ಟಿನ ಜ್ವರವು ದೂರಾಗಲಿ
ಕಲ್ಪನೆಯ ಕಾವು ಗರಿಗೆದರಲಿ..
ನವ ಕವನ ನೈಜವಾಗಿ ಬಾಳಲಿ ಸಾಗಲಿ..
@ಪ್ರೇಮ್@
26.02.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ