11. ಕಾಪಾಡು ತಂದೆ.
ಶಿವ ನೀನು ಕಾಯೋ ಎನ್ನ
ತಪ್ಪನ್ನೆಲ್ಲಾ ಕ್ಷಮಿಸೋ ನನ್ನಾ...
ಆಸೆ ಆಕಾಂಕ್ಷೆಯು ಬಾದಿಸುತಿಹುದೆನ್ನಲಿ...
ಅರಿಷಡ್ವರ್ಗಗಳಿಂದ ಜಗದೀಶ ಕಾಯೋ ನನ್ನ……
ಈಶ ನಿನ್ನಂತೆಯೆ ಮುಕ್ತಿ ಪಾಲಿಸೋ ದೇವ....
ಮಲ್ಲಿಕಾರ್ಜುನ ನಮ್ಮ ಕೈಯ ಹಿಡಿಯೋ ಸ್ವಾಮಿ,...
ಸದಾಶಿವನೇ ನಮ್ಮ ಕಾಯೋ ಬೆಂಬಿಡದೆ...
ಅಮೃತೇಶ್ವರ ಸ್ವಾಮಿ ಸಲಹೋ ಬೆನ್ನೆಲುಬಾಗಿ ನನ್ನಾ----
ಮಹಾಲಿಂಗೇಶ್ವರ ವರವಾ ಪಾಲಿಸೋ ಸ್ವಾಮಿ..
ಸೋಮನಾಥೇಶ್ವರ ಧೈರ್ಯ ಭಕ್ತಿ ನೀಡೋ ದೇವ ,....
ಪಂಚಲಿಂಗೇಶ್ವರ ಸತ್ಯ ಪಥವ ತೋರೋ ತಂದೆ..
ಹರಿಹರೇಶ್ವರ ಪಿತನೆ ಕರವಮುಗಿವೆ ನಿನಗೆನ್ನಾ…….
ಕಾರಿಂಜೇಶ್ವರನೇ ಶಕ್ತಿ ಶಾಂತಿ ಕೊಡು..
ಅನಂತೇಶ್ವರನೇ ಶತ್ರು ನಾಶ ಮಾಡು...
ತ್ರಿಶೂಲೇಶ್ವರನೇ ಕಷ್ಟದಿಂದ ಕಾಪಾಡು...
ಉಮಾಮಹೇಶ್ವರನೇ ಚೆನ್ನಾಗಿರಲಿ ನನ್ನಪಾಡು…..
@ಪ್ರೇಮ್@
ಮಲೆ ಮಹದೇಶ್ವರ ಸ್ವಾಮಿಯ ಬಗ್ಗಿ ಒಂದಷ್ಟು ಕವನ & ಕವಿತೆ ತಿಳಿಸಿ
ಪ್ರತ್ಯುತ್ತರಅಳಿಸಿ