ಗುರುವಾರ, ಜೂನ್ 27, 2019

1085. ರೈತ

ರೈತ

ಬೆವರು ಸುರಿಸಿ ದುಡಿವೆ ಜನರ ಹೊಟ್ಟೆ ತುಂಬಲೆಂದು..
ತವರು ಮನೆಯ ಹಾಗೆ ನನಗೆ ಗದ್ದೆ ತೋಟವೆಂದು..
ನಾನೆ ಸಾಕಿ ಬೆಳೆದ ಗಿಡವು ಫಸಲ ಕೊಡುವುದಂದ..
ಸಂತೆಯಲ್ಲಿ ಮಾರೆ ಅದನು ಕಾಸು ಮಾತ್ರ ಇಲ್ಲ ಕಂದ!//

ಬೆಳೆದ ಬೆಳೆಗೆ ಪಟ್ಟ ಕಷ್ಟ ನನಗೆ ಮಾತ್ರ ಗೊತ್ತು!
ಕಳೆದ ಕ್ಷಣ ನೆನಪಿಸುತ್ತ ಕುಳಿತರೇನು ಫಲವು?
ನಿನ್ನೆ ಕಳೆದು ನಾಳೆ ಬರಲು ಜೀವನವೇ ಬದಲು..
ಇಂದು ಸುಖವು, ನಾಳೆ ನೋವು ಇದು ಪ್ರಕೃತಿಯ ನಿಲುವು...//

ಕನಸು ಮನಸು ನೆನಪಿನಲ್ಲು ಕಾಯಕದ್ದೇ ಚಿಂತೆ!
ನಾಟಿ ಮಾಡಿ, ಗೊಬ್ರ ಹಾಕಿ ಬೀಜ ಬಿತ್ತಿ ಕಾದೆ!
ಮಳೆಯು ಇರದೆ ಬೆಳೆಯು ಸುಟ್ಟು ಹೋಯಿತಲ್ಲ ಹಾಗೆ..
ಧೈರ್ಯವನ್ನು ಕಳೆಯಲಿಲ್ಲ, ಪುನಃ ಪ್ರಯತ್ನವು ನನ್ನ ಕೆಲಸ.//

ಈಗ ಮಾತೆ ಮುನಿಯಲಿಲ್ಲ, ಬಂತು ಬೆಳೆಗೆ ಜೀವ ಕಳೆಯು!
ಕಷ್ಟ ದಿನವು ನೀಗಿ ಸುಖವು ಅರಸಿ ಬಂದಿತು!
ಸಾಲ ಮನ್ನವಾಯ್ತು! ಕುಟುಂಬ ನಕ್ಕಾಯ್ತು!//

ಆತ್ಮಹತ್ಯೆಯೆಂಬ ಪದವು ಸುಳಿಯಲಿಲ್ಲ,
ಬೇಗ ಬರಲಿ ಅಂತ ವಿಷವ ಸುರಿಯಲಿಲ್ಲ!
ಭೂಮಿ ತಾಯಿ ನನ್ನ ಮಾತೆ, ಉಳಿಸಬೇಕು ಹಾಗೆ!
ಮುಂದಿನ ಮನೆ ಮಕ್ಕಳೆಲ್ಲ ಬದುಕುತಿರಲಿ ಸಂತಸದಿ ಎಲ್ಲರೊಂದಾಗಿ//
@ಪ್ರೇಮ್@
27.06.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ