ಮನದಲಿ ಮೂಡಿಪ ರೂಪಕೆ ಶರಣು,
ನೆನಪಲಿ ಕಾಡಿದ ಯೋಗಿಗೆ ಶರಣು,
ಬುವಿಯಲಿ ನನ್ನಯ ಜೀವವ ತಂದ
ಶಕ್ತಿಯು ಎನ್ನುವ ದೇವಗೆ ಶರಣು...//
ಭಾವನೆ ಮನದಲಿ ತುಂಬಿಸಿ ಬಿಟ್ಟನು
ಕಾಮನೆ ಬಿಡಲದು ಸಲಹೆಯ ಕೊಟ್ಚನು
ಮಾನವನಾಗಿಹೆ ನಡತೆಯ ಕಲಿಯಲು
ದಾನವ ಗುಣವನು ತೊರೆಯಲು ತಿಳಿಸುತ..//
ಕಾಣದ ಲೋಕದಿ ತೆರಳುತ ನುಡಿದನು
"ನಿನ್ನಯ ಜೀವನ ರೂಪಿಸಿ ಬದುಕಲು,
ಮೋಸವ ಮಾಡದೆ ಬಾಳನು ಬೆಳಗಲು,
ನ್ಯಾಯದ ಹಾದಿಯ ಹಿಡಿಯುತ ನಡೆಯಲು//
ಅರಿವನು ಕೊಡುತಲಿ ಹೃದಯ ವಂತಿಕೆ
ಬೆಳೆಸುತ, ಬಡವರ ಕಣ್ಣೀರು ವರೆಸುತ,
ಹಲವಗೆ ಸಹಾಯ ಮಾಡುತ ಬಾಳಲು
ನೆಮ್ಮದಿ ಸಿಗುವುದು ಮೈಮನ ತಣಿವುದು..//
ಭೂಮಿಗೆ ಬಂದರೆ ಕುರುಹನು ಬಿಡುತಲಿ,
ಜೇವನ ಪಾವನ ಮಾಡುತ ನಲಿಯುತ
ತನ್ನಯ ಆತ್ಮದಿ ದೇವನ ಕರೆಯುತ
ನಗೆಯನು ಎಸೆಯುತ ಬಾಳ್ವೆಯ ಮಾಡುತ..//
ನನ್ನದು ಎನ್ನುವ ಮಾತದು ಏತಕೆ?
ಸಕಲವು ಎಂದರೆ ಸರ್ವರ ಹಿತಕ್ಕೆ,
ಬಾಳಲಿ ಅಂದದ ಗೂಡನು ನೋಡುವೆ
ಇಲ್ಲದೆ ಇದ್ದರೆ ಗುಂಡಿಗೆ ಬೀಳುವೆ..//
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ