ಬದುಕಲು ಕಲಿಯೋಣ
ಮಣ್ಣಿನ ಮಕ್ಕಳು ನಾವಾಗಿ ಬದುಕಲು
ಪ್ರಕೃತಿ ಕೊಟ್ಟಿದೆ ನಮಗೆ ಒಕ್ಕಲು!
ಮನೆಮಠ ವರುಣನ ಬಿರುಸಿಗೆ ಸಾಲದು
ಮೂರು ದಿನದ ಬದುಕದು ನಿಲ್ಲದು..
ಆಟವೂ ಊಟವೂ ಮಡಿಲದು ನಿನ್ನದೆ
ಮಳೆಯೋ ಬಿಸಿಲೋ ಆಸರೆ ಬೇಡಿದೆ,
ರಕ್ಷಕನು ನೀನೇ ಶಿಕ್ಷಕನೂ ನೀನೇ
ನಿನ್ನಯ ಮಕ್ಕಳ ಕಾಯುವೆ ತಾನೇ..
ಮಳೆಯೇ ಬರಲಿ, ಮುಳುಗಡೆಯಾಗಲಿ
ಬಾಳನು ದೂಡುವ ಶಕ್ತಿಯು ನಮಗಿರಲಿ,
ಆತ್ಮಾನಂದದಿ ತೃಪ್ತಿಯ ಕಾಣುತ
ಜಗದಲಿ ಬಾಳುವ ಆಗುತ ಶಾಂತ…
ಇರಲದು ಸೂರು ಬದುಕಲು ಸಾರು
ಮನದ ಬಾಳ್ವೆಗೆ ಪ್ರಾರ್ಥನೆ ಚೂರು,
ಬದುಕನು ನೋಡು ಆಳದ ಕಣ್ಣಲಿ
ಸಾಗುತಲಿರುವೆವು ಕಷ್ಟದ ಕಡಡಲಲಿ..
@ಪ್ರೇಮ್@
09.08.20196
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ