ಗುರುವಾರ, ಆಗಸ್ಟ್ 15, 2019

1180.ಕವಿತೆಗೆ

ಕವಿತೆಗೆ

ಕವಿತೆಯೇ ಬಾರೇ ಹೃದಯದ ಹೊರಗೆ
ಆವೇಗದಲಿ ನುಗ್ಗುತ ನನ್ನಯ  ಕೈಗಳಿಗೆ!
ನಿನ್ನಯ ಬರೆಯುತಲಿರುವೆ ಈ ಘಳಿಗೆ!
ಮರಳಿ ಸಾಗದಿರು ನರಗಳ ಕಡೆಗೆ!!

ಬರುತಲಿ ಭಾವಗಳ ನೀ ಅದುಮದಿರು
ತರುತಲಿ ಪದಗಳ ನೀ ಓಡದಿರು,
ಮನಕೆ ಶಾಂತಿಯ ನೀ ನೀಡುತಿರು,
ಕ್ಷಣಕೆ ಬಾಳನು ನೀ ಕಟ್ಟಿ ಕೊಡುತಿರು!

ಮನೆ ಮಠದಾಸೆಯ ತರಿಸದಿರು
ವಿಶ್ವ ಮಾನವನಾಗಲು ಹರಸುತಿರು,
ಇತರಗೆ ನೋವಾಗದಂತೆ ಬರುತಲಿರು
ಪದಭಂಡಾರವ ನೀ ತರುತಲಿರು..

ಆತುರ ಬೇಡವು ಗಮನವು ಇರಲಿ
ಕಾತರ ತಾಳೆನು ಪದಗಳು ಬಾಯಲಿ!
ಓದಿದ ಮೈಮನ ರೋಮಾಂಚನವಾಗಲಿ!
ನೋಡಿದ ಕಣ್ಗಳು ಸಾರ್ಥಕತೆ ಪಡೆಯಲಿ!
@ಪ್ರೇಮ್@
14.08.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ