ಲಘು ಬರಹ
ಹರಣದ ಕರುಣೆ
ರಂಗ-ರಂಗಿ ಮಾತಾಡ್ತಾ ಇದ್ರು. ರಂಗಿ ಹೇಳಿದ್ಳು- ಇವತ್ತು ಸ್ವಾತಂತ್ರ್ಯ ದಿನಾಚರಣೆ ಅಂತೆ, ಅದೊಂದ್ ದೋಡ್ ಹಬ್ಬಾನಂತೆ, ಪಾಯ್ಸಾನಾದ್ರೂ ಮಾಡಿ ಹಿರಿಯರ್ಗೆ ಎಡೆ ಇಡ್ಬೋದಾಗಿತ್ತೋ ಏನೋ..ಹೋಗ್ರೀ ಸಾಮಾನ್ ತಗೊಂಡ್ ಬರ್ರೀ.." ಅಲ್ಲಿದ್ದ ರಂಗ, "ಲೇ, ಅದು ಮನೇಲ್ ಮಾಡೋ ಹಬ್ಬ ಅಲ್ವೇ, ಅದು ಇಸ್ಕೂಲ್ ನಾಗೇ ಬಾವ್ಟ ಹಾರ್ಸೇ ಹಬ್ಬ. ಹೊಸ ಯೂನಿಪಾರ್ಮ್ ಆಕ್ಕೊಂಡು, ಹೂ ಇಡ್ಕೊಂಡ್ ಆಗ್ಲೇ ಐಕ್ಲು ಓಗಿದ್ ನೋಡಿಲ್ಲಾ ನೀನ್, ಎಡೆ ಬೇರೆ ಇಡ್ತಾಳಂತೆ!ಎಡೇನ!!" ರಂಗಿ, "ಸ್ವತಂತ್ರ ಬರೋಕೆ ಜನ ಎಲ್ಲ ಓರಾಡಿ, ಈಗ ಸತ್ತೋಗವ್ರೇ ಅಂತ ಮಾವ ಯೋಳಿಲ್ವೇ ಮತ್ತೆ, ಆ ಸತ್ತವ್ರಿಗೆ ಊಟ ಕೊಡೋದ್ಯಾವತ್ತು ಮತ್ತೇ?" ರಂಗ ಬಾಯ್ತೆರೆದು ನಗ್ತಾ ಹೇಳ್ದ, "ಅಯ್ಯೋ ಪೆದ್ದಿ, ಅಷ್ಟೂ ಗೊತ್ತಾಗಕ್ಕಿಲ್ವಾ ನಿನ್ ಮಂಕ್ ಬುದ್ಧೀಗೆ! ಅವ್ರಿಗೆಲ್ಲ ದಿನಾ ಇದಾನ್ ಸೋದದಾಗೆ ಮಂತ್ರಿಗಳೆಲ್ಲಾ ಕರ್ದು, ಮೀಟ್ಂಗ್ ಮಾಡಿ ಊಟ ಹಾಕ್ತಾರ್ ಕಣೇ. ಮತ್ತೆ ರೌಂಡಾಗಿ ಕೂತು ತಾವುಣ್ತಾರೆ, ನೋಡಿಲ್ವಾ ನೀನು ಟೀವಿನಾಗೆ! ಬರೇ ಧಾರ್ವಾಯಿ ನೋಡೋದ್ ಬುಟ್ಟು ನ್ಯೂಸಾ ನೋಡೋದೂ ಕಲ್ತ್ಕೋ ಮತ್ತೆ! ಇಲ್ಲಾಂದ್ರೆ ಬುದ್ಧಿ ಬೆಳೀವಲ್ದು! ರಂಗಿ,"ಸರಿ, ಬುಡ್ರೀ, ನಾ ಅಡ್ಗೇ ಮಾಡ್ತೀನೇಳಿ, ಲೇಟಾಯ್ತು.." ಹೀಗೆ ಸ್ವಾತಂತ್ರ್ಯ ಅಂದ್ರೆ ಇಸ್ಕೂಲ್ನಾಗೆ ಬಾವ್ಟ ಹಾರ್ಸೋ ಹಬ್ಬವಾಗುಳಿದಿದೆ ಈಗ!
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಆ ಭಯಾನಕ ಕರಾಳ ದೃಶ್ಯಗಳು ಸಿನೆಮಾ ರೂಪದಲ್ಲಿ ಇನ್ನೂ ಬರಬೇಕಿದೆ. ಇಲ್ಲಾಂದ್ರೆ ಇನ್ನೂ ಹಲವರಿಗೆ ಅದು ಬಾವುಟ ಹಾರಿಸೋ ಹಬ್ಬವಾಗಿ ಮುಂದಿನ ತಲೆಮಾರಿಗೆ ಅದರ ಮಹತ್ವ ತಿಳಿಯಲಾರದು!
ಹೇಳಿ ಕೇಳಿ ಪಾಶ್ಚಾತ್ಯರ ಸ್ವಚ್ಛತೆ, ಪರಿಸರ ಪ್ರಜ್ಞೆ ಇದನ್ನೆಲ್ಲಾ ಬಿಟ್ಟು ಅವರ ತುಂಡು ಬಟ್ಟೆಗಳ ಬಗ್ಗೆ, ಅವರು ರಸ್ತೆಯಲ್ಲಿ ಸಿಕ್ಕಾಗಲೂ ಮುತ್ತು ಕೊಟ್ಟು ತಮ್ಮನ್ನು ತಬ್ಬಿಕೊಳ್ಳೋ ಸಂಸ್ಕೃತಿಯನ್ನು ಮಾತ್ರ ಬೆಳೆಸಿಕೊಳ್ಳೋ ನಾವುಗಳು ಸ್ವಾತಂತ್ರ್ಯದ ಆಚರಣೆಯ ಮಹತ್ವ ಎಲ್ಲೆಡೆ ಸಾರಬೇಕಿದೆ, ನೀವೇನಂತೀರಿ?
@ಪ್ರೇಮ್@
16.08.2019
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ